Tulsi Plant: ತುಳಸಿಯನ್ನು ಪೂಜಿಸುವಾಗ ತಪ್ಪದೇ ಈ ಅಂಶ ನೆನಪಿನಲ್ಲಿಡಿ!

Tulsi Plant: ಹಿಂದೂ ಸಂಪ್ರದಾಯ ಪ್ರಕಾರ ಪ್ರತೀ ಮನೆಗಳಲ್ಲಿ ತುಳಸಿ ಗಿಡವನ್ನು (tulasi plant ) ನೆಡುತ್ತಾರೆ. ಅದಲ್ಲದೆ ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಮುಖ್ಯವಾಗಿ ತುಳಸಿಯನ್ನು ಸದಾಕಾಲ ಹಸಿರಾಗಿರುವಂತೆ ಇಟ್ಟುಕೊಳ್ಳುವುದು, ಕ್ರಮ ಬದ್ಧವಾಗಿ ಪೂಜಿಸುವುದು ಈ ಬಗ್ಗೆ ಶಾಸ್ತ್ರ ದಲ್ಲಿ ಹಲವು ನಿಯಮಗಳಿವೆ.

Sridevi Father Byrappa: ‘ನನ್ನ ಮಗಳು ವಿದ್ಯಾವಂತೆ, ಅವನು SSLC’- ಯುವ ಮಾವ ಭೈರಪ್ಪ ಮಾತು

ಈ ನಿಯಮಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಪಡೆಯುತ್ತಾನೆ. ಒಂದು ವೇಳೆ ನಿಯಮ ಪಾಲಿಸದೇ ಇದ್ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಪೂಜೆಗೆ (basil leaves) ಸಂಬಂಧಿಸಿದ ನಿಯಮಗಳ ಬಗ್ಗೆ ಇಲ್ಲಿ ತಿಳಿಯೋಣ ( Spiritual).

ದ್ವಾದಶಿ, ಚಂದ್ರಗ್ರಹಣ, ಸೂರ್ಯಗ್ರಹಣ ಮತ್ತು ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು, ಏಕೆಂದರೆ ಈ ದಿನಾಂಕಗಳಲ್ಲಿ ತುಳಸಿಯು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಆದ್ದರಿಂದ, ಈ ದಿನಾಂಕಗಳಲ್ಲಿ ತುಳಸಿ ದಳಗಳನ್ನು ಕೀಳಬಾರದು.

ಇನ್ನು ಸನಾತನ ಧರ್ಮದಲ್ಲಿ, ತುಳಸಿ ಸಸ್ಯವು ಪ್ರಪಂಚದ ಸೃಷ್ಟಿಕರ್ತನಾದ ಭಗವಾನ್ ವಿಷ್ಣುವಿಗೆ ಪ್ರಿಯವಾಗಿದೆ ಮತ್ತು ಲಕ್ಷ್ಮಿ ದೇವಿಯು ಅದರಲ್ಲಿ ನೆಲೆಸಿದ್ದಾಳೆ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜಿಸಿ, ದೀಪವನ್ನು ಹಚ್ಚಿದರೆ ಸಂಪತ್ತು, ಮನೆಗೆ ಸುಖ-ಸಂತೋಷ ಬರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಜೊತೆಗೆ ಧನಾತ್ಮಕ ಶಕ್ತಿಯೂ ಅಲ್ಲಿ ನೆಲೆಸಿರುತ್ತದೆ.

ತುಳಸಿಯನ್ನು ನಿತ್ಯ ಪೂಜಿಸಿ ನೀರು ಕೊಡಬೇಕೆಂಬ ನಿಯಮವಿದ್ದರೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ, ಭಾನುವಾರ, ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಕೊಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಅಂದು ತಿಳಸಿಯನ್ನು ಪೂಜಿಸಬಾರದು.

ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುವಾರ ಮತ್ತು ಶುಕ್ರವಾರ ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ತುಳಸಿಯನ್ನು ನೆಡುವುದರಿಂದ, ವ್ಯಕ್ತಿಯು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

Hibiscus: ಕೂದಲಿನ ಯಾವುದೇ ಸಮಸ್ಯೆಗೆ ಇದೊಂದೇ ರಾಮಬಾಣ! ದಾಸವಾಳದ ಹೂವಿನ ಪುಡಿಯನ್ನು ಹೀಗೊಮ್ಮೆ ಬಳಸಿ ನೋಡಿ!

Leave A Reply

Your email address will not be published.