Death News: ಜನ್ಮದಿನದ ಮುನ್ನಾ ದಿನವೇ ಹಾರಿಹೋಯ್ತು ಪ್ರಾಣ; ಮಳೆ ಎಂದು ಕಾರಿನಲ್ಲಿ ಕೂತ, ಮರ ಕಾರಿನ ಮೇಲೆ ಬಿತ್ತು

Death News: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ, ಬಿರುಗಾಳಿಗೆ ಮರ ಉರುಳಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಮಂಡ್ಯ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (27) ಮೃತ ಯುವಕ. ನಗರದ ಶಿಲಶ್ರೀ ಆಸ್ಪತ್ರೆ ಬಳಿ ಈ ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಿಕೊಂಡು ವಾಪಸಾಗುತ್ತಿದ್ದ ಕಾರ್ತಿಕ್, ಭಾರಿ ಮಳೆ ಸುರಿಯುತ್ತಿದ್ದರಿಂದ ಬೈಕ್ ನಿಲ್ಲಿಸಿ ರಸ್ತೆ ಬದಿಯಲ್ಲಿದ್ದ ಸ್ನೇಹಿತನ ಕಾರಿನೊಳಗೆ ಕುಳಿತಿದ್ದರು. ಈ ವೇಳೆ ಮರ ಉರುಳಿ ಕಾರು ನಜ್ಜುಗುಜ್ಜಾಗಿದ್ದು, ಕಾರಿನೊಳಗಿದ್ದ ಕಾರ್ತಿಕ್ ಸ್ಥಳದಲ್ಲೇ ಕೊನೆಯುಸಿರೆಳೆದರು.

ಇದನ್ನೂ ಓದಿ: H D Devegowda: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ- ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ ಎಚ್ ಡಿ ದೇವೇಗೌಡ !!

ಹೊರಗೆ ನಿಂತಿದ್ದ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. ಮೇ 7ರಂದು ಕಾರ್ತಿಕ್ ಹುಟ್ಟು ಹಬ್ಬವಿತ್ತು. ಹೀಗಾಗಿ ಹೊಸ ಬಟ್ಟೆ – ಖರೀದಿಸಿ, ತಂದೆಯ ಆರೋಗ್ಯ ವಿಚಾರಿಸಿಕೊಂಡು ಮನೆಗೆ ಹೊರಡುವಾಗ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಕಾರ್ತಿಕ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಸ್ಥಳಕ್ಕೆ ಪೊಲೀಸರು, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: Prajwal Revanna Video: ಪ್ರಜ್ವಲ್ ರೇವಣ್ಣ ವಿಡಿಯೋ ಇರೋದು ಕೇವಲ 2 ಗಂಟೆ 37 ನಿಮಿಷ ಮಾತ್ರ , ಉಳಿದದ್ದೆಲ್ಲ ಮಿಕ್ಸಿಂಗ್ !!

Leave A Reply

Your email address will not be published.