Puttur: ಜೀಪ್‌ ಮತ್ತು ಬೈಕ್‌ ನಡುವೆ ಡಿಕ್ಕಿ; ಜಾತ್ರೆಯಿಂದ ಹಿಂದಿರುಗುವ ಸಂದರ್ಭ ದುರ್ಘಟನೆ, ಓರ್ವ ಮೃತ್ಯು, ಮಕ್ಕಳಿಗೆ ಗಾಯ

Puttur: ಜೀಪ್‌ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಬೈಕ್‌ ಸವಾರ ಮೃತ ಹೊಂದಿದ್ದು, ಇಬ್ಬರು ಮಕ್ಕಳು ಗಾಯಗೊಂಡ ಘಟನೆಯೊಂದು ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: Jai Shri Ram: ಜೈ ಶ್ರೀರಾಮ್‌ ಎಂದವರ ಮೇಲೆ ಹಲ್ಲೆ ಪ್ರಕರಣ; ಮೂವರು ಅರೆಸ್ಟ್‌, ಒಬ್ಬ ಎಸ್ಕೇಪ್‌

ಮಂಗಳೂರಿನಲ್ಲಿ ಲಾರಿ ಚಾಲಕರಾಗಿದ್ದ ಲೋಕೇಶ್‌ ಎಂಬುವವರೇ ಮೃತರು. ಇವರು ಪುತ್ತೂರು ತಾಲೂಕಿನ ಕಡ್ಯ ನಿವಾಸಿ. ಇವರು ತಮ್ಮ ಮಕ್ಕಳೊಂದಿಗೆ ಪುತ್ತೂರು ಜಾತ್ರೆಗೆ ಆಗಮಿಸಿದ್ದು, ಹಿಂದಿರುಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಲೋಕೇಶ್‌ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mandya News: ಬೀದಿ ಬದಿಯ ಐಸ್‌ಕ್ರೀಂ ತಿಂದು ಅವಳಿ ಮಕ್ಕಳು ಸಾವು, ಸ್ಮೋಕ್‌ ಬಿಸ್ಕೆಟ್‌ ತಿಂದು ಬಾಲಕ ತೀವ್ರ ಅಸ್ವಸ್ಥ

Leave A Reply

Your email address will not be published.