Home Karnataka State Politics Updates Russia: ರಷ್ಯಾ ಯುದ್ಧಭೂಮಿಯಿಂದ ಮರಳಲು 20 ಭಾರತೀಯರು ಸಹಾಯ ಕೋರಿದ್ದಾರೆ : ಅಧಿಕೃತ ಹೇಳಿಕೆ ನೀಡಿದ...

Russia: ರಷ್ಯಾ ಯುದ್ಧಭೂಮಿಯಿಂದ ಮರಳಲು 20 ಭಾರತೀಯರು ಸಹಾಯ ಕೋರಿದ್ದಾರೆ : ಅಧಿಕೃತ ಹೇಳಿಕೆ ನೀಡಿದ ವಿದೇಶಾಂಗ ಸಚಿವಾಲಯ

Russia

Hindu neighbor gifts plot of land

Hindu neighbour gifts land to Muslim journalist

ಭಾರತಕ್ಕೆ ಮರಳಲು ಸಹಾಯ ಕೋರಿ “ಸುಮಾರು 20” ಭಾರತೀಯರು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ಭಾರತ ವಿದೇಶಾಂಗ ಸಚಿವಾಲಯ ಗುರುವಾರ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: Congress: ಕಾಂಗ್ರೆಸ್‌ ಮಹಾತ್ಮಾ ಗಾಂಧಿಯವರ ‘ಸೀತಾ ರಾಮನಲ್ಲಿ ನಂಬಿಕೆ ಇಟ್ಟಿದ್ದರೆ’, ಬಿಜೆಪಿ ಗೋಡ್ಸೆ’ರಾಮ’ನಲ್ಲಿ ನಂಬಿಕೆ ಇಟ್ಟಿದೆ: ಸಿಎಂ ಸಿದ್ದರಾಮಯ್ಯ

ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳು ಘರ್ಷಣೆ ನಡೆಸುತ್ತಿರುವ ವಲಯದಲ್ಲಿ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತವು ರಷ್ಯಾದೊಂದಿಗೆ ಸಂಪರ್ಕದಲ್ಲಿದೆ ಎಂದು ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

“20ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನಾವು ಹೊಂದಿದ್ದೇವೆ. ಅವರ ಶೀಘ್ರ ಬಿಡುಗಡೆಗಾಗಿ ನಾವು ನಮ್ಮ ಮಟ್ಟದಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ನಾವು ಈ ಮುಂಚೆ ಎರಡು ಮುನ್ನೆಚ್ಚರಿಕೆಗಳನ್ನು ನೀಡಿದ್ದೆವು” ಎಂದು ಜೈಸ್ವಾಲ್ ಹೇಳಿದರು.

ಉಕ್ರೇನ್ ಗಡಿಯ ಬಳಿ ಯುದ್ಧ, ಭೂಮಿಯಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರಿಗೆ ಸಂಬಂಧಿಸಿದ ಅಂತಹ ಎಲ್ಲಾ ಪ್ರಕರಣಗಳನ್ನು ರಷ್ಯಾದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಇದರ ಪರಿಣಾಮವಾಗಿ, ಅನೇಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಎಂಇಎ ಈ ಹಿಂದೆ ಹೇಳಿತ್ತು. ಆದರೆ ಗುರುವಾರ, ಶ್ರೀ ಜೈಸ್ವಾಲ್ ಅವರು ಇನ್ನೂ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ಸ್ಪಷ್ಟ ಸಂಖ್ಯೆಯನ್ನು ನೀಡಿದರು.

“ನಾವು ಮಾಸ್ಕೋದಲ್ಲಿನ ರಷ್ಯಾದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ” ಎಂದು ವಕ್ತಾರರು ಹೇಳಿದರು.

ಯುದ್ಧದಲ್ಲಿ ರಷ್ಯಾದ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ವಿದೇಶಿ ಕಾರ್ಮಿಕರಲ್ಲಿ ಹಲವಾರು ಭಾರತೀಯ ಪ್ರಜೆಗಳೂ ಸೇರಿದ್ದಾರೆ ಎಂಬದು ಎಲ್ಲರಿಗೂ ತಿಳಿದಿದೆ. ಮೂಲಗಳ ಪ್ರಕಾರ, ಭಾರತೀಯ ಪ್ರಜೆಗಳ ಜೊತೆಗೆ ನೇಪಾಳ ಮತ್ತು ಇತರ ಕೆಲವು ದೇಶಗಳ ನಾಗರಿಕರೂ ಸಹ ನೆಲದಲ್ಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.