Home Karnataka State Politics Updates Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

Parliament Election

Hindu neighbor gifts plot of land

Hindu neighbour gifts land to Muslim journalist

Parliment electionನಲ್ಲಿ ರಾಜ್ಯದ ಸಂಪೂರ್ಣ ಕ್ಷೇತ್ರಗಳಲ್ಲೂ ತಮ್ಮ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯ ಬಿಜೆಪಿ ನಾಯಕರು ಹರಸಾಸ ಪಡುತ್ತಿದ್ದು, ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಹೀಗಾಗಿ ಮಠಾಧಿಪತಿಗಳನ್ನು ಕೂಡ ಈ ಸಲ ಲೋಕಸಭಾ ಚುನಾವಣೆಲ್ಲಿ ಸ್ಪರ್ಧೆಗಿಳಿಸಲು ಚಿಂತನೆ ನಡೆಸಿದ್ದು, ಚಿತ್ರದುರ್ಗದ ಈ ಪ್ರಬಲ ಸ್ವಾಮಿಜಿಯನ್ನು ಕಣಕ್ಕಿಳಿಸಲು ಸಿದ್ದತೆ ನಡೆದಿದೆಯಂತೆ !!

ಇದನ್ನೂ ಓದಿ: Relationship Tips: ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಕೆಲವೊಂದು ಉಪಯೋಗಕಾರಿ ಮಾಹಿತಿ

Parliament Election
Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

ಹೌದು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ(Madara channayya swamiji) ಅವರನ್ನು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿ ಚುನಾವಣಾ ಅಖಾಡಕ್ಕೆ ಕರೆತರುವ ಪ್ರಯತ್ನ ಮತ್ತೆ ಮುನ್ನೆಲೆಗೆ ಬಂದಿದೆ. ಅಂದಹಾಗೆ ಕಳೆದ 2019ರ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ಸಂಘ ಪರಿವಾರ ಮತ್ತು ಬಿಜೆಪಿ ನಡೆಸಿತ್ತು. ಇದೀಗ ಈ ಪ್ರಯತ್ನ ಈ ವರ್ಷವೂ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಚಿತ್ರದುರ್ಗದ(Chitradurga) ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣ ಸ್ವಾಮಿ(Narayana Swamy) ಅವರ ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ಇದೆ. ಹೀಗಾಗಿ ಪಕ್ಷ ಗೆಲುವಿನ ನಗೆ ಬೀರಲು ಈ ನಿರ್ಧಾರ ಮಾಡಿದೆಯಂತೆ. ಆದರೆ ಈವರೆಗೆ ಸ್ವಾಮೀಜಿಗಳು ಈ ಬಗ್ಗೆ ಯಾವುದೇ ನಿರ್ಧಾರ ಅಥವಾ ನಿರ್ಣಯ ಕೈಗೊಂಡಿಲ್ಲ. ಆದರೆ, ಚುನಾವಣಾ ರಾಜಕಾರಣಕ್ಕೆ ಪ್ರವೇ‍ಶಿಸುವ ಬಗ್ಗೆ ವಿರೋಧವನ್ನೂ ತೋರಿಲ್ಲ. ನಿರ್ಲಿಪ್ತ ಮನೋಭಾವ ಹೊಂದಿದ್ದು ಚಿಂತನೆ ನಡೆಸಿದ್ದಾರೆ.