Rama prasada : ಹೀಗೆ ಮಾಡಿದ್ರೆ ಅಯೋಧ್ಯೆಯಿಂದ ರಾಮನ ಪ್ರಸಾದ ನೇರವಾಗಿ ನಿಮ್ಮ ಮನೆಗೆ ಬರುತ್ತೆ !!

 

Rama prasada: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಂಡಿದ್ದು, ಶ್ರೀರಾಮ ಪ್ರಭುವು ಅಯೋದ್ಯಾಧಿಪತಿಯಾಗಿ ವಿರಾಜಮಾನನಾಗಿದ್ದಾನೆ. ದೇಶದ ಕೋಟ್ಯಾಂತರ ಜನ ಬಾಲ ರಾಮನನ್ನು ಟಿವಿಗಳಿಂದ ಕಣ್ತುಂಬಿಕೊಂಡಿದ್ದು, ಮುಂದೆ ನೇರವಾಗಿ ನೋಡಿ, ಭಗವಂತನ ಕೃಪೆಗೆ ಪಾತ್ರರಾಗಲು ಕಾತರರಾಗಿದ್ದಾರೆ. ಈ ನಡುವೆ ಅಯೋಧ್ಯೆಯ ಶ್ರೀರಾಮನ ವರಪ್ರಸಾದವು ನೇರವಾಗಿ ಭಕ್ತಾದಿಗಳ ಮನೆಗೇ ಬರುತ್ತಿದೆ. ಈ ವಿಧಾನ ಅನುಸರಿಸುವುದುರಿಂದ ನೀವು ಶ್ರೀರಾಮನ ಪ್ರಸಾದವನ್ನು ಪಡೆಯಬಹುದು.

ಅಯೋಧ್ಯೆ ರಾಮನ ಪ್ರಸಾದ ಪಡೆಯಲು ಹೀಗೆ ಮಾಡಿ:
• ಮೊದಲು ವೆಬ್‌ಸೈಟ್ khadiorganic.comಗೆ (https://www.khadiindia.gov.in/) ಭೇಟಿ ನೀಡಿ ಇಲ್ಲಿ ನಿಮ್ಮ ಉಚಿತ ಪ್ರಸಾದ್ ಪಡೆಯಿರಿ ಎಂದು ಬರೆದಿರುವಲ್ಲಿ ಕ್ಲಿಕ್ ಮಾಡಿ.
• ವಿವರವಾದ ಮಾಹಿತಿ ಮತ್ತು ಸೂಚನೆಗಳೊಂದಿಗೆ ಮೀಸಲಾದ ಪುಟಕ್ಕೆ ಇದು ಕನೆಕ್ಟ್ ಆಗುತ್ತದೆ.
• ನೋಂದಣಿ ಫಾರ್ಮ್ ಅನ್ನು ಪ್ರವೇಶಿಸಲು ಈಗ ಬುಕ್ ಮಾಡಿ ಎಂಬ ಆಪ್ಶನ್‌ ಕ್ಲಿಕ್ ಮಾಡಿ.
• ಹೆಸರು, ಫೋನ್ ಸಂಖ್ಯೆ ಮತ್ತು ಸಂಪೂರ್ಣ ವಿತರಣಾ ವಿಳಾಸ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
• ಮಾಹಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಬುಕಿಂಗ್ ಅನ್ನು ಖಚಿತಪಡಿಸಲು ಸಬ್ಮಿಟ್ ಅಥವಾ ಸಲ್ಲಿಸು ಕ್ಲಿಕ್ ಮಾಡಿ.
• ಇದು ಹಣ ಪಾವತಿಗೆ ಲಿಂಕ್ ಆಗುತ್ತದೆ. ಹಣ ಪಾವತಿಯಾದೊಡನೆ ನಿಮ್ಮ ಪ್ರಸಾದ ಬುಕ್ಕಿಂಗ್ ವಿಧಾನ ಪೂರ್ಣಗೊಳ್ಳುತ್ತದೆ.

Leave A Reply

Your email address will not be published.