Sullia News: ಅಯ್ಯಪ್ಪ ಮಾಲಾಧಾರಿ ನೇಣು ಬಿಗಿದು ಆತ್ಮಹತ್ಯೆ!!

Sullia: ಅಯ್ಯಪ್ಪ ಮಾಲಾಧಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆಯೊಂದು ಸುಳ್ಯ ಮರ್ಕಂಜದ ಸೇವಾಜೆ ಎಂಬಲ್ಲಿ ನಡೆದಿದೆ.

ಪದ್ಮನಾಭ ( 30) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದು, ಇಂದು ಆಶ್ರಮದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಮೃತದೇಹವನ್ನು ಮಹಜರು ಬಳಿಕ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೌಟುಂಬಿಕ ಸಮಸ್ಯೆಯೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: LPG Price: ಸಿಹಿ ಸುದ್ದಿ, ಎಲ್‌ಪಿಜಿ ದರದಲ್ಲಿ ಮತ್ತೆ ಇಳಿಕೆ!

Leave A Reply

Your email address will not be published.