Davangere road Accident:ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ ಬಸ್ ಭೀಕರ ಅಪಘಾತ- ಆದ್ರೆ ಮುಂದೆಯೇ ಇದ್ದ ಇವರಿಗೇನು ಆಗಲೇ ಇಲ್ಲ !! ಮುಂಭಾಗ ಛಿದ್ರವಾದ್ರೂ ಇವರು ಭದ್ರವಾದದ್ದೇಗೆ ?!

Davangere road accident bus going to Belagavi session met with a terrible accident latest news

Davangere Road Accident : ಬೆಳಗಾವಿ ಅಧಿವೇಶನದ ಸಮಯದಲ್ಲಿ ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಕೆಲ ಹೋರಾಟಗಾರರು ಪ್ರತಿಭಟಿಸಲು ಯೋಜನೆ ಹಾಕಿದ್ದರು. ಹೀಗಾಗಿ, ತಡರಾತ್ರಿ ಖಾಸಗಿ ಬಸ್‌ ಮಾಡಿಕೊಂಡು ತೆರಳುತ್ತಿದ್ದ ಸಂದರ್ಭ ದಾವಣಗೆರೆಯ(Road Accident in davangere) ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಭೀಕರ ಅಪಘಾತ (Road Accident ) ಸಂಭವಿಸಿದೆ.

ದಾವಣಗೆರೆಯಲ್ಲಿ ನಡೆದ ಅವಘಡದಲ್ಲಿ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಇಬ್ಬರು ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನು 17 ಮಂದಿ ಗಾಯಗೊಂಡಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಭೀಕರ ಅಪಘಾತದಲ್ಲಿ ಬಸ್ ಪೂರ್ತಿ ಜಖಂ ಆಗಿದ್ದು, ಡ್ರೈವರ್‌ ಸೀಟ್‌ ಪೂರ್ತಿ ನಜ್ಜುಗುಜ್ಜಾಗಿದೆ. ಆದರೆ ಡ್ರೈವರ್‌ ಸೀಟ್‌ನಲ್ಲಿ ಅಳವಡಿಸಿದ್ದ ಡಾ. ರಾಜ್‌ಕುಮಾರ್‌ ಫೋಟೊ ಏನು ಆಗಿಲ್ಲ ಅನ್ನೋದು ವಿಶೇಷ.

ಇದನ್ನೂ ಓದಿ: Home Decor:ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಸಾಕು, 5 ಸ್ಟಾರ್ ಹೋಟೆಲ್ ರೀತಿ ಕಾಣೋದು ಮಾತ್ರವಲ್ಲ ಸದಾ ಸುವಾಸನೆಯಿಂದ ಕೂಡಿರುತ್ತೆ!!

Leave A Reply

Your email address will not be published.