Drought Relief: ರಾಜ್ಯದ ರೈತರಿಗೆ ಬೊಂಬಾಟ್ ನ್ಯೂಸ್ – ನಿಮ್ಮ ಕೈ ಸೇರುತ್ತೆ 22,500 ದಷ್ಟು ಭರ್ಜರಿ ಬೆಳೆ ಪರಿಹಾರ !! ಹೀಗೆ ಮಾಡಿದರಷ್ಟೇ
State Government announced good news for farmers regarding Drought Relief Fund
![Drought Relief](https://hosakannada.com/wp-content/uploads/2023/12/WhatsApp-Image-2023-12-07-at-4.36.25-PM1.jpeg)
Drought Relief: ರಾಜ್ಯದ ರೈತರೇ ಗಮನಿಸಿ, ನಿಮಗೊಂದು ಖುಷಿಯ ಸುದ್ದಿ (Good News)ಹೊರಬಿದ್ದಿದೆ. ಬರ ಪರಿಸ್ಥಿತಿ(Drought)ಹಿನ್ನೆಲೆಯಲ್ಲಿ ಎನ್ ಡಿಆರ್ ಎಫ್(NDRF)ಅನುದಾನ ಬಂದ ಬಳಿಕ ಹೆಕ್ಟೇರ್ ಗೆ 22,500 ರವರೆಗೆ ಬೆಳೆ ಪರಿಹಾರ (Drought Relief)ನೀಡಲಾಗುವ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
![](https://hosakannada.com/wp-content/uploads/2024/07/First.jpeg)
ಇದನ್ನು ಓದಿ: 7th pay commission: 7ನೇ ವೇತನ ಆಯೋಗ ಜಾರಿ – ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ!!
![](https://hosakannada.com/wp-content/uploads/2024/07/Middle.jpeg)
ಕೇಂದ್ರ ಸರ್ಕಾರ(Central Government)ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ ಅನುದಾನ ನಿರೀಕ್ಷಿಸಿ ಬೆಳೆ ಹಾನಿ (crop loss)ಪರಿಹಾರದ ಮೊದಲ ಕಂತಿನ ರೂಪದಲ್ಲಿ ಅರ್ಹ ರೈತರಿಗೆ ತಲಾ ₹ 2 ಸಾವಿರ ಪಾವತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರದಿಂದ ಅನುದಾನ ಬಂದ ಕೂಡಲೇ ಎಸ್ಡಿಆರ್ಎಫ್ ಮಾರ್ಗಸೂಚಿಯ ಅನುಸಾರ ಪರಿಹಾರ ನೀಡಲಾಗುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್ಗೆ ಪರಿಹಾರ ನಿಗದಿ ಮಾಡಲಾಗಿದೆ.ಹೆಕ್ಟೇರ್ಗೆ ₹ 22,500 ರವರೆಗೆ ಬೆಳೆ ಪರಿಹಾರ ನೀಡಲಾಗುತ್ತದೆ. ಮಳೆಯಾಶ್ರಿತ ಬೆಳೆಗಳಿಗೆ-8,500 ರೂ. ಪರಿಹಾರ ಸಿಗಲಿದೆ. ನೀರಾವರಿ ಬೆಳೆಗೆ-17,000 ರೂ. ಸಿಗಲಿದ್ದು, ಬಹುವಾರ್ಷಿಕ ಬೆಳೆಗೆ- 22,500 ರೂ. ನಿಗದಿ ಮಾಡಲಾಗಿದೆ.