Hassan: ತಡವಾಗಿ ಶಾಲೆಗೆ ಬಂದ ಶಿಕ್ಷಕರು; ಶಾಲೆಗೆ ಎಂಟ್ರಿ ಕೊಟ್ಟಾಗ ಕಾದಿತ್ತು ಶಾಕಿಂಗ್‌ ನ್ಯೂಸ್‌!!!

Hassan: ಶಾಲೆಗೆ ತಡವಾಗಿ ಬಂದಿದ್ದಕ್ಕೆ ಒಂದು ದಿನದ ವೇತನವನ್ನು ಕಡಿತಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿರುವ ಘಟನೆಯೊಂದು ನಡೆದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೈಚನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಶಾಲೆಗೆ ಡಿಡಿಪಿಐ ಜವರೇಗೌಡ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಪ್ರಾರ್ಥನಾ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಮೂವರು ಶಿಕ್ಷಕರ ಒಂದು ದಿನದ ವೇತನ ಕಡಿತಗೊಳಿಸಲಾಗಿದೆ.

ಗುರುವಾರ ಬೆಳಗ್ಗೆ 10 ಗಂಟೆಗೆ ಶಾಲೆಗೆ ದಿಢೀರ್‌ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸೇರಿ ಮೂವರು ತಡವಾಗಿ ಶಾಲೆಗೆ ಆಗಮನಿಸಿದ್ದ ಕಾರಣ ಅವರ ಒಂದು ದಿನದ ವೇತನ ಕಡಿತಗೊಳಿಸಲಾಗಿದೆ.

ಇದನ್ನು ಓದಿ: Harassment: ಪೊಲೀಸ್ ಅಧಿಕಾರಿಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಸಾರ್ವಜನಿಕರಿಂದ ಬಿತ್ತು ಹಿಗ್ಗಾ ಮುಗ್ಗ ಗೂಸಾ

Leave A Reply

Your email address will not be published.