Bigg Boss Season 10:ಈ ಸಲ 100% ಬಿಗ್ ಬಾಸ್ ಗೆಲ್ಲುವುದು ಇವರೇ – ಆರ್ಯವರ್ಧನ್ ಗುರೂಜಿಯಿಂದ ಅಚ್ಚರಿ ಭವಿಷ್ಯ !!

Entertainment news aryavardhan guruji prediction about Bigg Boss Kannada 10 winner

Aryavardhan Guruji: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡಿದ್ದಾರೆ. ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಸ್ಪರ್ಧಿಗಳ ನಡುವೆ ಜಗಳ , ಗಲಾಟೆ, ಮಾತಿನ ಚಕಮಕಿ ನಡುವೆ ಆಟಗಳು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ಬಿಗ್ಬಾಸ್ ವಿನ್ನರ್(Bigg Boss Kannada Season 10 Winner)ಯಾರಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈ ನಡುವೆ, ಮಾಜಿ ಬಿಗ್ಬಾಸ್ ಸ್ಪರ್ಧಿ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ(Aryavardhan Guruji) ಈ ಬಾರಿ ಬಿಗ್ಬಾಸ್ ಗೆಲುವಿನ ಕಿರೀಟ ಯಾರ ಪಾಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ದೊಡ್ಮನೆಯಲ್ಲಿ ಎರಡು ತಂಡದ ಸದಸ್ಯರು ಪ್ರತೀ ಆಟದಲ್ಲಿಯೂ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಆಡುತ್ತಿದ್ದಾರೆ. ಹಲವು ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿರುವ ಹಿನ್ನೆಲೆ ಈ ಬಾರಿ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ!!ಇದಕ್ಕೆ ಮಾಜಿ ಬಿಗ್ಬಾಸ್ ಸ್ಪರ್ಧಿ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಭವಿಷ್ಯ ನುಡಿದಿದ್ದಾರೆ.

ಆರ್ಯವರ್ಧನ್ ಗುರೂಜಿ ಭವಿಷ್ಯದ ಅನುಸಾರ, ಈ ಬಾರಿ ವರ್ತೂರು ಸಂತೋಷ್ ಅವರು ಬಿಗ್ಬಾಸ್ ವಿನ್ನರ್ ಆಗಲಿದ್ದರಾರಂತೆ. ”ವರ್ತೂರು ಸಂತೋಷ್ ಅವರದ್ದು ಮೀನ ರಾಶಿಯಂತೆ. ಇವರ ರಾಶಿ ಪ್ರಕಾರ ಅನುಕೂಲಕರ ವಾತಾವರವಿದೆಯಂತೆ. ಇದರ ಜೊತೆಗೆ ವರ್ತೂರು ಸಂತೋಷ್ ಚೆನ್ನಾಗಿ ಮನರಂಜನೆ ನೀಡಬಲ್ಲ ವ್ಯಕ್ತಿ ಆದರೆ ಹೊರಗೆ ಆಗಿರುವ ಘಟನೆಯಿಂದ ಅವರು ಕೊಂಚ ಮಟ್ಟಿಗೆ ವೀಕ್ ಆಗಿದ್ದಾರೆ. ಈ ಹಂತದಲ್ಲಿ ಜನರ ಬೆಂಬಲ ಅವರಿಗೆ ಬೇಕಾಗಿದ್ದು, ಒಬ್ಬ ಬ್ಯಾಟ್ಸ್ಮ್ಯಾನ್ 100 ಹೊಡೆಯಬೇಕೆಂದರೆ ಆರಂಭದ ಕೆಲವು ಬಾಲ್ಗಳನ್ನು ರಕ್ಷಣಾತ್ಮಕವಾಗಿ ಆಡಲೇ ಬೇಕಾಗುತ್ತದೆ” ಎಂದು ಆರ್ಯವರ್ಧನ್ ಗುರೂಜಿ ಹೇಳಿಕೊಂಡಿದ್ದಾರೆ.

ಇದನ್ನು ಹೊರತುಪಡಿಸಿ, ವರ್ತೂರ್ ಅವರು ಒಳ್ಳೆಯ ವ್ಯಕ್ತಿ. ಬಿಗ್ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಧಾರಾವಾಹಿ ಹಿನ್ನೆಲೆಯಿಂದ ಬಂದವರು. ಅಷ್ಟೇ ಅಲ್ಲದೆ, ಪರಸ್ಪರರ ಬಗ್ಗೆ ತಿಳಿದಿರುವವರು. ಇದಲ್ಲದೆ, ಜನರಿಗೂ ಅವರ ಬಗ್ಗೆ ತಿಳಿದಿದೆ. ಆದರೆ ವರ್ತೂರು ಸಂತೋಷ್ಗೆ ಇದು ಯಾವುದೂ ಕೂಡ ಗೊತ್ತಿಲ್ಲ. ಮನೆಯ ಒಳಗೆ ಮಾತ್ರವಲ್ಲದೇ ಹೊರಗೆ ಕಾನೂನು ರೀತಿಯಾಗಿಯೂ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು” ಎಂದು ಅರ್ಯವರ್ಧನ್ ಗುರೂಜಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಮದುವೆಯಾಗೋರಿಗೆ ಸಿಹಿ ಸುದ್ದಿ- ಬರ್ತಿದೆ ನಿಮಗೂ ಈ ಎಲ್ಲಾ ಹೊಸ ‘ಭಾಗ್ಯ’ !!

Leave A Reply

Your email address will not be published.