Yuvanidhi scheme: ʼಡಿಪ್ಲೋಮಾ, ಪದವೀಧರʼರಿಗೆ ಗುಡ್‌ನ್ಯೂಸ್‌!!! ರಾಜ್ಯ ಸರಕಾರದಿಂದ 5ನೇ ಗ್ಯಾರಂಟಿ ʼಯುವನಿಧಿʼ ಯೋಜನೆ ಕುರಿತು ಬಿಗ್‌ ಅಪ್ಡೇಟ್‌!!!

Karnataka news Congress guarantee govt gave big update on Yuvanidhi scheme latest news

Yuvanidhi scheme : ಡಿಪ್ಲೋಮಾ ಪದವೀಧರರಿಗೆ ಗುಡ್‌ನ್ಯೂಸ್‌ವೊಂದು ದೊರಕಿದ್ದು, ಯುವನಿಧಿ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್‌ ಆರ್‌.ಪಾಟೀಲ್‌ ತಿಳಿಸಿದ್ದಾರೆ.
ಯುವನಿಧಿ ಯೋಜನೆಯನ್ನು ಡಿಸೆಂಬರ್‌ ತಿಂಗಳಿನಲ್ಲಿ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದ್ದು, ಈ ಯೋಜನೆಗೆ 250 ಕೋಟಿ ಹಣ ಅನುದಾನ ನಿಗದಿಪಡಿಸಲಾಗಿದೆ ಎಂದು ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಡಿಸೆಂಬರ್‌ನಿಂದ ರಾಜ್ಯದ ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆಯಂತೆ ಡಿಪ್ಲೋಮಾ ಮಾಡಿದವರಿಗೆ 1500 ರೂ. ಪದವೀಧರರಿಗೆ 3000ರೂ. ಯುವನಿಧಿ ಯೋಜನೆಯಡಿ(Yuvanidhi scheme ) ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಉದಯೋನ್ಮುಖ ಪ್ರವೃತ್ತಿಗಳು ಮತ್ತು ವಿಷಯಗಳನ್ನು ಬೆಂಬಲಿಸಲು ಅಗತ್ಯವಿರುದ ಕೌಶಲ್ಯಗಳನ್ನು ನೀಡುವುದು, ಈ ನಿಟ್ಟಿನಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಕಾರ್ಯಾಗಾರ ಹಾಗೂ ಸಂವಹನದ ಕೌಶಲ್ಯತೆ ಹೆಚ್ಚಿಸಬೇಕು ಎಂದು ಕೈಗಾರಿಕಾ ತರಬೇತಿ ಕೇಂದ್ರಗಳ ಪ್ರಾಚಾಯರ್ರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.

ಇದನ್ನೂ ಓದಿ: Karnataka CM: ಸಿದ್ದರಾಮಯ್ಯರ ಬಳಿಕ ಡಾ. ಪರಮೇಶ್ವರ್ ರಾಜ್ಯದ ಸಿಎಂ ?!

Leave A Reply

Your email address will not be published.