Mysore Dasara: ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕ ಗೃಹ ಇಲಾಖೆಗೆ ತುರ್ತು ಸಂದೇಶ, ಬೆಂಗಳೂರಿನಲ್ಲೂ ಹೈ ಅಲರ್ಟ್‌, ಮೈಸೂರು ದಸರಾದಲ್ಲಿ ತೀವ್ರ ತಪಾಸಣೆ!

mysuru centre directs karnataka home ministry to tight the security and bangalore terror threat latest news

Bangaluru-Mysore: ದಸರಾ ಸಂಭ್ರಮ ಕಳೆಗಟ್ಟಿದೆ. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಗೃಹ ಇಲಾಖೆಗೆ ಹೈಅಲರ್ಟ್‌ ಸಂದೇಶ ಬಂದಿದೆ. ಮೈಸೂರು ಹಾಗೂ ಬೆಂಗಳೂರು ನಗರವನ್ನು ಉಗ್ರರು ಟಾರ್ಗೆಟ್‌ ಮಾಡಿದ್ದು, ಶೀಘ್ರವೇ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದಾರೆಂದು ಕೇಂದ್ರ ಗೃಹ ಇಲಾಖೆಯು ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಹಾಗಾಗಿ ಎಲ್ಲೆಡೆ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ಮೈಸೂರು ದಸರಾದಲ್ಲಿ ಅರಮನೆ ಹಾಗೂ ಅರಮನೆ ಆವರಣ, ಜಂಬೂ ಸವಾರಿ ಸಾಗುವ ಮಾರ್ಗ ಎಲ್ಲಾ ಕಡೆ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲಾಗುತ್ತಿದೆ. ಸ್ತಬ್ದಚಿತ್ರಗಳನ್ನು ಕೂಡಾ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿದೆ.

ಇದನ್ನೂ ಓದಿ: Tiger Claw Pendant: ಹುಲಿ ಉಗುರು ಪ್ರಕರಣ; ವರ್ತೂರು ಸಂತೋಷ್‌, ದರ್ಶನ್‌ ಬಳಿಕ ವಿನಯ್‌ ಗುರೂಜಿ ವಿರುದ್ಧ ದೂರು ದಾಖಲು

Leave A Reply

Your email address will not be published.