Gruhalakshmi Scheme: ಈ ತಿಂಗಳಲ್ಲಿ ಗೃಹಲಕ್ಷ್ಮೀ ಅರ್ಜಿ ಹಾಕಿರೋರಿಗೆ ಬಂತು ಬಿಗ್ ಅಪ್ಡೇಟ್ !! ನೀವು ಯಾವಾಗ ಹಾಕಿದ್ದು? ಈಗಲೇ ಚೆಕ್ ಮಾಡಿ !

Congress guarantee big update for gruhalakshmi scheme those who applied after August

Gruhalakshmi Scheme: ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ (Gruhalakshmi Scheme) ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಸದ್ಯ ಗೃಹಲಕ್ಷ್ಮಿ’ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಈ ತಿಂಗಳಲ್ಲಿ ಗೃಹಲಕ್ಷ್ಮೀ ಅರ್ಜಿ ಹಾಕಿರೋರಿಗೆ ಬಿಗ್ ಅಪ್ಡೇಟ್ ಬಂದಿದೆ. ನೀವು ಯಾವಾಗ ಹಾಕಿದ್ದು? ಈಗಲೇ ಚೆಕ್ ಮಾಡಿ!!!.

ಈಗಾಗಲೇ ಸುಮಾರು 80% ನಷ್ಟು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ 20% ನಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಇದಕ್ಕೆ ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ (Aadhaar Seeding) ಆಗದೇ ಇರುವುದು ಮಹಿಳೆಯರ ಹೆಸರು ವಿಳಾಸ ರೇಷನ್ ಕಾರ್ಡ್‌ ಬ್ಯಾಂಕ್ ಖಾತೆ (bank account) ಹಾಗೂ ಆಧಾರ್ ಕಾರ್ಡ್‌ (Aadhaar Card) ನ ಪ್ರಕಾರ ಮ್ಯಾಚ್ ಆಗದೆ ಇರುವುದು ಪ್ರಮುಖವಾದ ಕಾರಣವಾಗಿದೆ.

ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆ ಹಳೆಯದ್ದು, ಆ ಖಾತೆ ಆಕ್ಟಿವ್ (active) ಆಗಿಲ್ಲ. ಈ ಕಾರಣದಿಂದಲೂ ಕೂಡ ಹಣ ಸಂದಾಯವಾಗಿಲ್ಲ. ಅಷ್ಟೇ ಅಲ್ಲದೆ ಅರ್ಜಿ ಹಾಕಿದ ಸುಮಾರು 3000ಕ್ಕೂ ಹೆಚ್ಚಿನ ಮಹಿಳೆಯರು ಮೃತಪಟ್ಟಿರುವುದರಿಂದ ಅಂಥವರ ಖಾತೆಗೂ ಹಣ ವರ್ಗಾವಣೆ ಆಗುವುದಿಲ್ಲ. ಸದ್ಯದಲ್ಲಿ ಈ ಎಲ್ಲಾ ಸಮಸ್ಯೆಗಳು ಪರಿಹಾರವಾದ ನಂತರ ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ (Money Bank Transfer) ಮಾಡಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ಜೊತೆಗೆ ಆಗಸ್ಟ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸದೆ ಸೆಪ್ಟೆಂಬರ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರೆ ಅಂತವರ ಖಾತೆಗೆ ಹಣ ಬಿಡುಗಡೆ ಆಗುವುದು ಬಹುತೇಕ ತಡ ಆಗಬಹುದು. ಅಥವಾ ಅಂಥವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗದೇ ಇರಬಹುದು. ಆದರೆ ಸಪ್ಟೆಂಬರ್ (September) ತಿಂಗಳಿನಲ್ಲಿ ಬಿಡುಗಡೆ ಆಗಬೇಕಿದ್ದ ಎರಡನೇ ಕಂತಿನ ಹಣ ಅಕ್ಟೋಬರ್ (October month) ತಿಂಗಳ ಕೊನೆಯ ಒಳಗೆ ಎಲ್ಲರ ಖಾತೆಗೂ ಜಮಾ ಆಗಲಿದೆ. ಹಾಗಾಗಿ ತಡವಾಗಿ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್ ತಿಂಗಳಿನಿಂದ ಅವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯಲಿದೆ.

ಫಲಾನುಭವಿ ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಅಂಗನವಾಡಿ ಶಿಕ್ಷಕ ಅಥವಾ ಸಹಾಯಕಿಯರ ಸಹಾಯ ಪಡೆದುಕೊಳ್ಳಬಹುದು.

ಅಂದಹಾಗೆ, ಯಾರ ಖಾತೆಗೆ ಹಣ ಸಂದಾಯವಾಗಿಲ್ಲವೋ ಅಂಥವರ ಹೆಸರು ಹಾಗೂ ಕಾರಣವನ್ನು ಹೊಂದಿರುವ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಹಾಗಾಗಿ ಸ್ಥಳೀಯ ಸಿಡಿಪಿಓ ಅಧಿಕಾರಿಗಳ ಬಳಿ ನೇರವಾಗಿ ಸಂಪರ್ಕ ಮಾಡಿ ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Vehicle Rule: ಡೀಸೆಲ್ ವಾಹನ ಹೊಂದಿರೋರಿಗೆ ಬಂತು ಹೊಸ ರೂಲ್ಸ್- ಏಕಾಏಕಿ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ

Leave A Reply

Your email address will not be published.