Hyderabad: ಹೈದರಬಾದಲ್ಲಿ ಕರ್ನಾಟಕ ಸಚಿವರ ಹುಚ್ಚಾಟ – ಮದುವೆಯಲ್ಲಿ ಪಾಲ್ಗೊಂಡ ಮಂತ್ರಿಗೆ ದುಡ್ಡಿನಭಿಷೇಕ !! ಕಾಲಮೇಲೆಲ್ಲಾ ಝಣ, ಝಣ ಕಾಂಚಣ !
![Hyderabad](https://hosakannada.com/wp-content/uploads/2023/10/WhatsApp-Image-2023-10-18-at-10.jpg)
Hyderabad: ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾದ ಜನಾಬ್ ರಹೀಮ್ ಖಾನ್ ಅವರ ಮಗನ ಮದುವೆ ಹೈದರಾಬಾದ್ನಲ್ಲಿ (Hyderabad) ಅದ್ಧೂರಿಯಾಗಿ ಜರುಗಿದ್ದು, ಈ ವಿವಾಹ ಮಹೋತ್ಸವದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಉಪಸ್ಥಿತರಿದ್ದರು. ಈ ವೇಳೆ ಅವರ ಮೇಲೆ ಹಣದ ಸುರಿಮಳೆಗೈಯಲಾಯಿತು. ಕಾಲಮೇಲೆಲ್ಲಾ ಝಣ, ಝಣ ಕಾಂಚಣ ಸುರಿಯಲಾಗಿದೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
![](https://hosakannada.com/wp-content/uploads/2024/07/First.jpeg)
ಸದ್ಯ ಮದುವೆ ಸಂಭ್ರಮದಲ್ಲಿ ಮೋಜು-ಮಸ್ತಿ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬರ, ಹನಿ ನೀರಿಗೂ ಪರದಾಡುವ ಮೂಲಕ ಜನ ಸಂಕಷ್ಟದಲ್ಲಿದ್ದರೆ ಸಚಿವರು ಮಾತ್ರ ಕಾಲ ಕೆಳಗೆ ರಾಶಿ ರಾಶಿ ಹಣ ಹಾಕಿ ಕೂತು ರಾಜರೋಷವಾಗಿ ಮೆರೆಯುತ್ತಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಸಚಿವರ ಕಾಲಡಿಯಲ್ಲಿ ರಾಶಿ ಹಣ ಬಿದ್ದಿದ್ದರೂ ಕುಂತಲ್ಲೇ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ಹೈದರಾಬಾದ್ನಲ್ಲೆ ನಡೆದ ಸ್ನೇಹಿತನ ಮಗನ ಮದುವೆ ಸಂಭ್ರಮದಲ್ಲಿ ಸಚಿವರ ಕಾರುಬಾರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ: Property Rule: ಸ್ವಂತ ಆಸ್ತಿ, ಜಮೀನು ಹೊಂದಿದವರಿಗೆ ಮಹತ್ವದ ಸುದ್ದಿ- ಆಸ್ತಿ ಪತ್ರಗಳಿಗೆ ಬರಲಿದೆ ಹೊಸ ರೂಲ್ಸ್