Sowjanya Case Re-Investigation: ಸೌಜನ್ಯ ಪ್ರಕರಣದ ಮರು ತನಿಖೆ: ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ ಆರಂಭ ! ಇಂದು ಮಹೇಶ್ ಶೆಟ್ಟಿ ತಿಮರೋಡಿ ಭಾಗಿ

Sowjanya Case Re-Investigation Okkaliga District Struggle Committee Starts Dharani Satyagraha

Sowjanya Case Re-Investigation: ಮಂಗಳೂರು: ಸೌಜನ್ಯ ಪ್ರಕರಣದ ಮರು ತನಿಖೆಗೆ( Sowjanya Case Re-Investigation) ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಾಂಸ್ಥಿಕ ರೂಪ ಪಡೆದುಕೊಂಡಿದೆ. ಇವತ್ತಿನಿಂದ ಮಹಾತ್ಮಾ ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಎರಡು ದಿನಗಳ ಕಾಲ ಧರಣಿ ಪ್ರಾರಂಭವಾಗಿದೆ. ಧರಣಿ ಸತ್ಯಾಗ್ರಹವು ಮಂಗಳೂರಿನ ಮಿನಿ ವಿಧಾನ ಸೌಧದ ಎದುರು, ಕ್ಲಾಕ್ ಟವರ್ ಪಕ್ಕಾ ಇಂದು ಮಂಗಳವಾರ ಆರಂಭಗೊಂಡಿದೆ.


ಸೌಜನ್ಯಾ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಮರು ತನಿಖೆ ನಡೆಸಬೇಕು, ಪ್ರಕರಣದ ತನಿಖಾಧಿಕಾರಿಯನ್ನು, ವೈದ್ಯರನ್ನು ತನಿಖೆಗೆ ಒಳಪಡಿಸಬೇಕು, ಮರು ತನಿಖೆಗೆ ಸರ್ಕಾರವು ಆದೇಶ ಮಾಡುವವರೆಗೂ ನಮ್ಮ ಪ್ರತಿಭಟನೆ ಹೀಗೆ ಮುಂದುವರಿಯುತ್ತದೆ ಎಂದು ಧರಣಿ ನಿರತರು ಎಚ್ಚರಿಸಿದ್ದಾರೆ.

ಸೆ.13ರಂದು ಸಂಜೆ ಪ್ರತಿಭಟನಾ ಸಭೆಗೆ ಸೌಜನ್ಯ ಪರ ಮುಂಚೂಣಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಭಾಗವಹಿಸಲಿದ್ದಾರೆ.

ಪ್ರತಿಭಟನೆ ಆರಂಭ

ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಾಲಕೃಷ್ಣ ಗೌಡ ಡಿಬಿ ಅವರು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಬೇಕು, ಈಗಾಗಲೇ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ವೈದ್ಯರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಸೌಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಾವು ಒಂದು ವಾರ ಧರಣಿ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದೇವು.ಆದರೆ ನಮಗೆ ಎರಡು ದಿನಗಳ ಕಾಲ ಹೋರಾಟ ನಡೆಸಲು ಅನುಮತಿ ಸಿಕ್ಕಿದೆ. ಜಿಲ್ಲೆಯ ಆರು ತಾಲೂಕುಗಳ ಒಕ್ಕಲಿಗರ ಯಾನೆ ಗೌಡರ ಸಂಘಟನೆಯ ಧುರೀಣರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ದಿನ ಜಿಲ್ಲೆಯ ಮೂರು ತಾಲೂಕುಗಳ ಸಂಘಟನೆಗಳ ಧುರೀಣರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಎರಡನೇ ದಿನ ಮೂರು ತಾಲೂಕುಗಳ ಸಂಘದ ಧುರೀಣರು ಭಾಗವಹಿಸಲಿದ್ದಾರೆ. ನ್ಯಾಯ ಸಿಗುವ ತನಕ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಸ್ಥಳಕ್ಕೆ ಆಗಮಿಸಿ ನಮ್ಮಮನವಿಯನ್ನು ಸ್ವೀಕರಿಸಬೇಕು ಎಂದು ಅವರು ಆಗ್ರಹಿಸಿದರು.

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು ಬಿ ಅವರು ಮಾತನಾಡಿ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ವಿಚಾರಣೆ ನಡೆದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.ಅಂದು ಆರೋಪಿಯಾಗಿ ಗುರುತಿ ಸಿಕೊಂಡಿದ್ದ ವ್ಯಕ್ತಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಆದರೆ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿದ ಮತ್ತು ಆಕೆಯನ್ನು ಕೊಲೆಗೈದ ನೈಜ ಆರೋಪಿಗಳು ಯಾರು ಮತ್ತು ಇದಕ್ಕೆ ನೆರವು ನೀಡಿದವರು ಯಾರು ಎಂಬ ವಿಚಾರ ತನಿಖೆಯಿಂದ ಹೊರ ಬಂದಿಲ್ಲ.

ಯಾವುದೇ ಹೆಣ್ಣಿಗೂ ಸೌಜನ್ಯಳಿಗೆ ಆಗಿರುವ ಸ್ಥಿತಿ ಬರಬಾರದು. ಸೌಜನ್ಯ ಕೊಲೆ ಪ್ರಕರಣದ ತಾರ್ಕಿಕವಾದ ಅಂತ್ಯ ತಲುಪಬೇಕು. ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಹೋರಾಟವಾಗಿದೆ ಎಂದು ಹೇಳಿದರು.

ಗೌಡರ ಯಾನೆ ಒಕ್ಕಲಿಗರ ಸಂಘದ ವಿವಿಧ ತಾಲೂಕುಗಳ ಧುರೀಣರಾದ ಕುಶಾಲಪ್ಪ ಗೌಡ ಪೂವಾಜೆ ಪದ್ಮನಾಭ ಗೌಡ ಬೆಳ್ತಂಗಡಿ, ಚಂದ್ರ ಕೊಳ್ಳಾರ್ ಸುಳ್ಯ ಸುರೇಶ್ ಬೈಲ್ ಕಡಬ, ಮೋನಪ್ಪ ಗೌಡ ವಿಟ್ಲ ಧರ್ಮಾವತಿ ಗೌಡ, ಕಿರಣ್ ಬುಡ್ಲೆಗುತ್ತು ರಕ್ಷಿತ್, ನಾಗೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಚಾಲೆಂಜ್ ಗಾಗಿ ತಿಂದದ್ದು ಮಸಾಲೆ ಹಾಕಿದ ಖಾರದ ಚಿಪ್ಸ್ !! ತಿಂದ ಕೂಡಲೇ ಹಾರಿಯೊಯ್ತು ಹುಡುಗನ ಪ್ರಾಣ !!

Leave A Reply

Your email address will not be published.