HomeKarnataka State Politics UpdatesAdhar card- Ration card: ಆಧಾರ್-ರೇಷನ್ ಕಾರ್ಡ್ ಗೆ ಬಂತು ಹೊಸ ರೂಲ್ಸ್!! ಇದನ್ನು ಮಾಡ್ಲಿಲ್ಲ...

Adhar card- Ration card: ಆಧಾರ್-ರೇಷನ್ ಕಾರ್ಡ್ ಗೆ ಬಂತು ಹೊಸ ರೂಲ್ಸ್!! ಇದನ್ನು ಮಾಡ್ಲಿಲ್ಲ ಅಂದ್ರೆ ಸದ್ಯದಲ್ಲೇ ನಿಮ್ಮ ರೇಷನ್ ಕಾರ್ಡ್ ಆಗುತ್ತೆ ಕ್ಯಾನ್ಸಲ್!!

Hindu neighbor gifts plot of land

Hindu neighbour gifts land to Muslim journalist

Adhar card- Ration card: ರೇಷನ್ ಕಾರ್ಡ್(Ration card)ವಿಚಾರದಲ್ಲಿ ಅನೇಕ ಗೋಲ್ ಮಾಲ್ ಗಳು ನಡೆಯುತ್ತಿದ್ಧು, ಕಳ್ಳ ಕಾಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅರ್ಹರಲ್ಲದವರೂ ಕೆಲವು ಯೋಜನೆಗಳನ್ನು ಅನ್ಯಮಾರ್ಗದಲ್ಲಿ ಪಡೆಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ರೇಷನ್ ಕಾರ್ಡ್‍ಗೆ ಆಧಾರ್ ಲಿಂಕ್(Adhar card ) ಮಾಡುವುದನ್ನು ಕಡ್ಡಾಯಗೊಳಿಸಿದೆ.

ಹೌದು, ಕೇಂದ್ರ ಸರ್ಕಾರ(Central Government) ಇತ್ತೀಚೆಗಷ್ಟೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಕೊನೆಗೊಳಿಸಿದೆ. ಇದೀಗ ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ (Aadhaar-Ration Card Link) ಆಪೆಡೇಟ್ ಮಾಡುವುದು ಕಡ್ಡಾಯ ಮಾಡಲಾಗಿ, ಕೊನೆಯ ದಿನಾಂಕದ ಗಡುವನ್ನು ನೀಡಿದೆ.

ಅಂದಹಾಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಕಟ್ಟುನಿಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಆಧಾರ್‌ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಅನರ್ಹರನ್ನು ಪತ್ತೆಹಚ್ಚಲು ಮತ್ತು ಬಳಕೆದಾರರು ಬಹು ಪಡಿತರ ಚೀಟಿಗಳನ್ನು ಹೊಂದುವುದನ್ನು ತಡೆಯಲು ಸರ್ಕಾರ ಈ ನಿಯಮವನ್ನು ರೂಪಿಸಿದೆ. ಆಧಾರ್-ಪಡಿತರ ಚೀಟಿ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30 ಕೊನೆಯ ದಿನಾಂಕವಾಗಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇದುವರೆಗೆ ತಮ್ಮ ದಾಖಲೆಗಳನ್ನು ಲಿಂಕ್ ಮಾಡದ ಜನರಿಗೆ ಸಾಕಷ್ಟು ಸಮಯ ಸಿಕ್ಕಂತಾಗಿದೆ. ಸೆಪ್ಟೆಂಬರ್(September) 30ರ ಕೊನೆಯ ದಿನಾಂಕದ ನಂತರ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ.

ಲಿಂಕ್ ಮಾಡುವುದು ಹೇಗೆ ?
ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ನೀವು ಆಧಾರ್ ನಂಬರ್ ಲಿಂಕ್ (Aadhaar Number Link) ಮಾಡಬಹುದು. ಇಲ್ಲ ರಾಜ್ಯ ಪಿಡಿಎಸ್ ವೆಬ್ಸೈಟ್ ಮೂಲಕವೂ ರೇಷನ್ ಕಾರ್ಡ್ ಲಿಂಕ್ (Ration Card Link) ಮಾಡಬಹುದಾಗಿದೆ. ಹೀಗೆ ಮಾಡಿದ್ದಲ್ಲಿ ಮಾತ್ರ ಉಚಿತ ಅನ್ನ ಭಾಗ್ಯ ಯೋಜನೆ ಯನ್ನು ಪಡೆಯಲು ಸುಲಭವಾಗುತ್ತದೆ. ಇಲ್ಲದಿದ್ದಲ್ಲಿ ಪಡಿತರ ಪಡೆಯಲು ಸಮಸ್ಯೆ ಆಗಬಹುದಾಗಿದೆ. ಅಲ್ಲದೆ ಇದರಿಂದ ನಕಲಿ ಕಾರ್ಡ್ ಗಳು ಪತ್ತೆಯಾಗುತ್ತವೆ, ಈ ಕಾರಣದಿಂದ ಈ ಆದೇಶವನ್ನು ನೀಡಲಾಗಿದೆ.

ಆನ್ ಲೈನ್ ಮೂಲಕವೂ ಮಾಡಿ:
• ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮೊದಲು ವೆಬ್‌ಸೈಟ್ food.wb.gov.in ಗೆ ಭೇಟಿ ನೀಡಿ.
• ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ನಮೂದಿಸಿ.
• ನಿಮ್ಮ ಮೊಬೈಲ್ ಸಂಖ್ಯೆಗೆ ನೀವು OTP ಬಂದ ನಂತರ OTP ಹಾಕಿ ಆಗ ನಿಮ್ಮ ರೇಷನ್ ಆಧಾರ್ ಲಿಂಕ್ ಆಗುತ್ತದೆ.

 

ಇದನ್ನು ಓದಿ: Madhya Pradesh urination case: ಮೂತ್ರ ವಿಸರ್ಜನೆ ಸಂತ್ರಸ್ತನ ಪಾದ ತೊಳೆದು ಸನ್ಮಾನ ಮಾಡಿದ ಸಿಎಂ ಶಿವರಾಜ್ ಚವ್ಹಾಣ್ 

RELATED ARTICLES

5 COMMENTS

Most Popular

Recent Comments