Bangalore Mysore Expressway: ಬೆಂ- ಮೈ ಎಕ್ಸ್​​ಪ್ರೆಸ್​​ ವೇ ಅಪಘಾತ ಸರಣಿಗೆ ಕಾರಣ ಬಹಿರಂಗ, ಸಂಸದ ಪ್ರತಾಪ್ ಸಿಂಹ ಹೇಳಿದ ಸತ್ಯ!

latest news what MP Prathap Simha said about Bangalore Mysore Expressway

Bangalore Mysore Expressway: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ರೆ ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಬೆಂ- ಮೈ ಎಕ್ಸ್​​ಪ್ರೆಸ್ ವೇನಲ್ಲಿ ಅಪಘಾತ ಸಂಖ್ಯೆ ಮಿತಿ ಮೀರಿದೆ ಎಂದು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬೆನ್ನಲ್ಲೆ ಪ್ರತಾಪ್ ಸಿಂಹ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ (Bangalore Mysore Expressway) ವೇಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ . ಅಲ್ಲದೇ ಶ್ರಾಂತಿ ಪ್ರದೇಶ, ಮೈಸೂರು ರಿಂಗ್ ರಸ್ತೆ (ಮಣಿಪಾಲ್ ಆಸ್ಪತ್ರೆ ಜಂಕ್ಷನ್) ಬಳಿ ಫ್ಲೈಓವರ್, ಕುಂಬಳಗೋಡು ಬಳಿ ಅಂಡರ್‌ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು.

ಈ ಎಲ್ಲಾ ಸಮಸ್ಯೆಗಳನ್ನು ಕೇವಲ 10 ತಿಂಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ. ಮೆಲ್ನೋಟಕ್ಕೆ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ ಅಪಘಾತ ಹೆಚ್ಚಾಗಲು ಇದುವೆ ಕಾರಣವಾಗಿರಬಹುದು ಎಂದು ಅನುಮಾನ ಪಡಲಾಗುತ್ತಿದೆ.

ಈಗಾಗಲೇ ಫ್ರಾರಂಭಗೊಂಡ ದಿನದಿಂದ 568 ಅಪಘಾತಗಳು ನಡೆಸಿದೆ ಎಂದು ವರದಿಯಾಗಿದೆ. 158ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ತಿಳಿದು ಕಳೆದೆರಡು ದಿನಗಳ ಹಿಂದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಗಳ ಸಮಸ್ಯೆಗಳ ಬಗ್ಗೆ ಎನ್‌ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು.

 

ಇದನ್ನು ಓದಿ: PF Balance: ನೀವು ಕೂಡಾ PPF ಚಂದಾದಾರರೇ, ಬಡ್ಡಿ ದರದ ಬಗ್ಗೆ ಬರ್ತಿದೆ ಲೇಟೆಸ್ಟ್ ಅಪ್ಡೇಟ್ ! 

Leave A Reply

Your email address will not be published.