Prashanth Neel: ಪುನೀತ್ ರಾಜ್‌ಕುಮಾರ್ ಅಂದ್ರೆ ನನಗೆ ಒಂಚೂರು ಇಷ್ಟವಿಲ್ಲ, ಅವರನ್ನು ಕಂಡ್ರೆ ಆಗಲ್ಲ !! ಶಾಕಿಂಗ್ ಹೇಳಿಕೆ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್ !!

Sandalwood news cinema news I Hated Puneeth Rajkumar a lot Director Prashanth Neel shocking statement

Prashanth Neel: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power star punith rajkumar)ಹಾಗೂ ಪ್ರಶಾಂತ್ ನೀಲ್(Prashanth neel) ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟ ಹಾಗೂ ನಿರ್ದೇಶಕರು. ಈ ಇಬ್ಬರು ಮೇರು ವ್ಯಕ್ತಿಗಳು ಸ್ಯಾಂಡಲ್ ವುಡ್(Sandalwood)ನ ಕಲಾವಿದರಾಗಿ ಮಾತ್ರವಲ್ಲದೇ ಸಂಬಂಧಿಕರೂ ಕೂಡ ಆಗಿದ್ದರು. ಸಂಬಂಧಿಕರೆಂದ ಮೇಲೆ ಉತ್ತಮವಾದ ಬಾಂಧವ್ಯ ಇದ್ದೇ ಇರುತ್ತದೆ. ಆದರೆ ಇದೀಗ ಪುನೀತ್ ರಾಜ್ ಕುಮಾರ್ ಕುರಿತು ಪ್ರಶಾಂತ್ ನೀಲ್ ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗ್ತಿದೆ.

ಹೌದು, ಪ್ರಶಾಂತ್ ನೀಲ್ ಅವ್ರು ಶ್ರೀಮುರುಳಿ(Shree murali) ಅವರ ಪತ್ನಿಯ ಸಹೋದರ. ಆ ಕಾರಣದಿಂದಾಗಿ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೂ ಹತ್ತಿರದವರಾಗಿದ್ದರು. ಆದರೆ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಅಪ್ಪು ಬಗ್ಗೆ ಮಾತನಾಡುತ್ತಾ, ಪುನೀತ್ ರಾಜಕುಮಾರ್ ಕಂಡರೆ ನನಗೆ ಚೂರೂ ಆಗುತ್ತಿರಲಿಲ್ಲ ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ತಮ್ಮ ಮೊದಲ ಚಿತ್ರವಾದ ಉಗ್ರಂ(Ugram) ಮೂಲಕ ಕನ್ನಡಿಗರ ಮನೆ ಮಾತಾದ ಪ್ರಶಾಂತ್ ಇನ್ನು ಪ್ರಶಾಂತ್ ನೀಲ್ ಉಗ್ರಂ ಚಿತ್ರವನ್ನು ಮುಗಿಸಿದ ಬಳಿಕ ಪುನೀತ್ ರಾಜ್‌ಕುಮಾರ್‌ಗಾಗಿ ಹೊಸದೊಂದು ಸ್ಕ್ರಿಪ್ಟ್ ರೆಡಿಮಾಡಿಕೊಂಡಿದ್ದರು. ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದ ಈ ಚಿತ್ರಕ್ಕೆ ಆಹ್ವಾನ(Ahwana) ಎಂಬ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಶೀರ್ಷಿಕೆ ಇಡಬೇಕು ಎಂಬ ಯೋಜನೆ ಕೂಡ ನಡೆದಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದ ಕಾರಣ ಈ ಚಿತ್ರ ಸೆಟ್ಟೇರಲಿಲ್ಲ. ನಂತರ ಪ್ರಶಾಂತ್ ಅವ್ರು ಕೆಜಿಎಫ್(KGF) ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದರು.

ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಪುನೀತ್ ರಾಜ್‌ಕುಮಾರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಆ ವೇಳೆ ತನಗೆ ಪುನೀತ್ ಕಂಡರೆ ಯಾಕೆ ಆಗೋದಿಲ್ಲ, ಅವರು ತನಗೆ ಮಾಡಿದ್ದಾದರೂ ಏನು? ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಹೌದು, ಆಂಕರ್ ಅನುಶ್ರೀ(Anushree) ನಡೆಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್ “ಭಾನುವಾರ ಕ್ರಿಕೆಟ್(Cricket) ಆಡೋಕೆ ಅಂತ ಕ್ರೀಡಾಂಗಣಕ್ಕೆ ಬಂದೆವು. ಆದರೆ ಅಲ್ಲಿ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಎಷ್ಟು ಬೈಕೊಂಡೆ ಅಂದ್ರೆ ನಾನು.. ಯಾರು ಗುರು ಶೂಟಿಂಗ್ ಅದು ಇದು ಅಂದ್ರೆ.. ಅಣ್ಣಾವ್ರ ಕೊನೆ ಮಗನ ಫಸ್ಟ್ ಸಿನಿಮಾ ಅಪ್ಪು ಶೂಟಿಂಗ್ ನಡಿತಿದೆ ಅಂತ ಗೊತ್ತಾಯಿತು. ಯಾಕೆ ಅವರು ಹೊರಗೆ ಹೋಗಿ ಶೂಟಿಂಗ್ ಮಾಡಬಾರದು, ಇದು ನಮ್ಮ ಜಾಗ ಎಂದು ಬೈದುಕೊಂಡಿದ್ದೆ” ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು “ಅಲ್ಲೇ ರಕ್ಷಿತ(Rakshitha) ಇದ್ರು, ಅಪ್ಪು ಸರ್ ಇದ್ರು, ಅಲ್ಲೇ ನಿಂತುಕೊಂಡು ಶೂಟಿಂಗ್ ನೋಡ್ತಾ ಇದ್ವಿ. ಅಲ್ಲೇ ಒಂದು ದ್ವೇಷ ಶುರುವಾಗಿಹೋಯಿತು. ಅದು ನನ್ನ ತಲೆಯಲ್ಲಿ ಬಹಳ ದಿನಗಳ ಕಾಲ ಉಳಿದುಬಿಟ್ಟಿತು. ಅಪ್ಪು(Appu) ರಿಲೀಸ್ ಆಗಿ ಐವತ್ತು ದಿನಗಳಾದ್ರೂ ನಾನು ಆ ಚಿತ್ರ ನೋಡಿರಲಿಲ್ಲ. ಅವರು ಬಂದು ನಮ್ಮ ಕ್ರಿಕೆಟ್ ಹಾಳು ಮಾಡಿಬಿಟ್ಟಿದ್ರು ಎಂಬ ಕಾರಣದಿಂದಲೇ ಹೋಗಿರಲಿಲ್ಲ. ನಮ್ಮ ತಾಯಿಯ ಮನೆ ಶಿವಮೊಗ್ಗಕ್ಕೆ ಹೋಗಿದ್ವಿ. ಮದುವೆ ಇತ್ತು, ಮದುವೆ ಮುಗಿದು ಆರತಕ್ಷತೆಗೆ ಸಂಜೆವರೆಗೂ ಟೈಮ್ ಇತ್ತು. ಎಲ್ಲರೂ ಅಪ್ಪು ಚಿತ್ರಕ್ಕೆ ಹೋಗೋಣ ಅಂದಿದ್ರು. ನಾನು ಬರಲ್ಲ ಹೋಗಿ ಎಂದಿದ್ದೆ. ಆದ್ರೂ ಬಲವಂತವಾಗಿ ಕರೆದುಕೊಂಡು ಹೋದರು. ಆ ಸಮಯದಲ್ಲಿ ಅವರ ಫ್ಯಾನ್ ಆದ ನಾನು ನನ್ನ ಜೀವನಪೂರ್ತಿ ಫ್ಯಾನ್ ಆಗಿಬಿಟ್ಟೆ” ಎಂದು ಅಪ್ಪು ಬಗ್ಗೆ ಪ್ರೀತಿಯಿಂದ ಹುಟ್ಟಿದ ಹುಸಿ ದ್ವೇಷದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: Sakshi shivanand: ಪ್ರೀತಿ ಬಲೆಗೆ ಬಿದ್ದು ಗಂಡನಿಂದಲೇ ಮೋಸ ಹೋದ ಸಾಕ್ಷಿ ಶಿವಾನಂದ್!! ಸಿನಿಮಾ ಬದುಕಿನಿಂದಲೇ ದೂರವಾದ ನಟಿ ಈಗ ಹೇಗಿದ್ದಾರೆ?

Leave A Reply

Your email address will not be published.