Home Karnataka State Politics Updates Siddaramaiah-DKSivakumar: ನಾಳೆ ಸಿದ್ದರಾಮಯ್ಯ-ಡಿಕೆಶಿವಕುಮಾರ್‌ ಪ್ರತಿಜ್ಞಾವಿಧಿ ಸಮಾರಂಭ : ಮಳೆ ಅಡ್ಡಿ ಸಾಧ್ಯತೆ, ಹೆಚ್ಚುವರಿ...

Siddaramaiah-DKSivakumar: ನಾಳೆ ಸಿದ್ದರಾಮಯ್ಯ-ಡಿಕೆಶಿವಕುಮಾರ್‌ ಪ್ರತಿಜ್ಞಾವಿಧಿ ಸಮಾರಂಭ : ಮಳೆ ಅಡ್ಡಿ ಸಾಧ್ಯತೆ, ಹೆಚ್ಚುವರಿ ಪೊಲೀಸ್‌ ಭದ್ರತೆ

Siddaramaiah-DKSivakumar

Hindu neighbor gifts plot of land

Hindu neighbour gifts land to Muslim journalist

Siddaramaiah-DKSivakumar: ಬೆಂಗಳೂರು : ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಜ್ಞಾವಿಧಿ ಸಮಾರಂಭಕ್ಕೆ, ಕಠೀರವ ಸ್ಟೇಡಿಯಂ ಭರ್ಜರಿಯಾಗಿ ಸಿದ್ದತೆ ನಡೆಯುತ್ತಿದೆ. ಈ ಬೆನ್ನಲ್ಲೆ ಮಳೆ ಅಡ್ಡಿಯಾಗುವ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದೆ ಈ ಕುರಿತ ಮಾಹಿತಿ ಇಲ್ಲಿದೆ ಓದಿ…

ನಾಳೆ (ಮೇ20ರಂದು) ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಸಿಎಂ ಆಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ (Siddaramaiah-DKSivakumar) ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಈ ಸುವರ್ಣ ಸಂಭ್ರಮದಲ್ಲಿ ಹವಮಾನ ಇಲಾಖೆ ಮಳೆ ಬರುವ ಸಾಧ್ಯತೆ ಬಗ್ಗೆ ಸೂಚನೆ ನೀಡಿದ್ದು, ಕಾಂಗ್ರೆಸ್‌ ಪಾಳಯಕ್ಕೆ ಸಂಭ್ರಮದ ನಡುವೆ ಹೊಸ ಶಾಕ್‌ ನೀಡಿದಂತಾಗಿದೆ.

9೦೦ ಮೀಟರ್ ಸಮುದ್ರ ಮಟ್ಟದಿಂದ ಉತ್ತರ ಪ್ರದೇಶದಲ್ಲಿ ವಾಯು ಭಾರ ಕುಸಿತವಾಗಿದ್ದು, ನಾಳೆ ಸಿಲಿಕಾನ್‌ ಸಿಟಿಯ ಬೆಂಗಳೂರಲ್ಲಿ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ನಾಳೆ ಮಧ್ಯಾಹ್ನದ ನಂತರ ಸಾಧಾರಣ ಮಳೆ ಸಾಧ್ಯತೆಯಿದೆ, ಬೆಳಗ್ಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ಮಾಹಿತಿ ನೀಡಿದೆ.

ನಾಳೆ ನಡೆಯುವ ಸಿದ್ದು-ಡಿಕೆಶಿ ಪ್ರತಿಜ್ಞಾವಿಧಿ ಸಮಾರಂಭಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಹಲವು ಗಣ್ಯರು ಆಗಮಿಸುವ ಹಿನ್ನೆಲೆ ಹೆಚ್ಚಿನ ಪೊಲೀಸ್‌ ಭದ್ರತೆ ನೀಡಲಾಗಿದೆ.

ಅಲ್ಲದೇ ವಿವಿಐಪಿಗಳಿಗೆ ಅಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ನಗರದಲ್ಲಿ ಪೊಲೀಸ್ ಕಮಿಷನರ್, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. 8 ಮಂದಿ ಡಿಸಿಪಿ, 10 ಮಂದಿ ಎಸಿಪಿ, 28 ಇನ್ಸ್​​ಪೆಕ್ಟರ್​ಗಳು, 1,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಂಚಾರ ನಿರ್ವಹಣೆಗಾಗಿ 500 ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.

 

ಇದನ್ನು ಓದಿ: Nalin Kumar: ಪುತ್ತೂರು ಘಟನೆಗೆ ನಳಿನ್ ಕುಮಾರ್, ಪ್ರಭಾಕರ ಭಟ್ ನೇರ ಕಾರಣ -ಆರೋಪ