Basana Gowda Patil: ನನ್ನ ಕ್ಷೇತ್ರದಲ್ಲಿ ನಾನೇ ಆ್ಯಕ್ಟರ್, ಡೈರೆಕ್ಟರ್ ಎಲ್ಲಾ ನಾನೇ -ಬಸನಗೌಡ ಪಾಟೀಲ್ ಯತ್ನಾಳ್: ಸುದೀಪ್ ಪ್ರಚಾರಕ್ಕೆ ಯಾಕೆ ?

ವಿಜಯಪುರ: ಇಲ್ಲಿ ಬಿಜೆಪಿ ಪರ ಸುದೀಪ್ ಪ್ರಚಾರಕ್ಕೆ ಬರೋ ಅಗತ್ಯ ಇಲ್ಲ. ಚಿತ್ರ ನಟ ಸುದೀಪ್ ವಿಜಯಪುರಕ್ಕೆ ಪ್ರಚಾರಕ್ಕೆ ಬರುವುದು ಬೇಡ. ನಾನೇ ಅವರಿಗಿಂತ ಚೆನ್ನಾಗಿ ನಟನೆ ಮಾಡಿ ಹೆಚ್ಚು ಫೇಮಸ್ ಆಗಿದ್ದೇನೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್(Basana Gowda Patil) ಅವರು ಹೇಳಿದ್ದಾರೆ.

“ವಿಜಯಪುರಕ್ಕೆ ಪ್ರಚಾರಕ್ಕೆ ಮೋದಿ, ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬರುತ್ತಾರೆ. ಯಾವುದೇ ಸಿನಿಮಾ ನಟರುಗಳು ನನಗೆ ಬೇಡ. ಚಿತ್ರ ನಟರಿಗಿಂತಲೂ ನಾನೇನು ಕಮ್ಮಿಇಲ್ಲ. ಇಲ್ಲಿ ಡೈರೆಕ್ಷನ್, ಆಕ್ಟಿಂಗ್, ಕಥಾ ಸಂಕಲನ ನಾನೇ ಮಾಡುತ್ತೀನಿ ” ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patil) ತನ್ನ ಎಂದಿನ ಬೋಲ್ಡ್ ಮಾತುಗಳಲ್ಲಿ ಹೇಳಿದ್ದಾರೆ.

” ನಾನು ಈ ಮೊದಲು ಮುಸ್ಲಿಮರ ಮತಗಳು ನನಗೆ ಬೇಡ ಎಂದು ಹೇಳಿದ್ದೆ. ನನಗೆ ಹಿಂದೂಗಳ ಮತಗಳೇ ಸಾಕು. ಆ ಹೇಳಿಕೆಯನ್ನು ನಾನು ವಾಪಸ್ ಪಡೆಯುವುದಿಲ್ಲ. ಈಗಲೂ ಆ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ” ಎಂದು ಯತ್ನಾಳ್ ಹೇಳಿದ್ದಾರೆ.

“ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿತ್ತು. ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷಕ್ಕೆ ದ್ರೋಹ ಬಗೆಯಬಾರದು. ಹಿಂದೆ ನನಗೂ ಟಿಕೆಟ್ ಕೈತಪ್ಪಿತ್ತು. ಆದರೆ ನಾನು ಪಕ್ಷ ಬಿಟ್ಟಿರಲಿಲ್ಲ. ಪಕ್ಷದಿಂದ ಉಚ್ಚಾಟನೆ ಮಾಡಿದ ಮೇಲೆ ಅನಿವಾರ್ಯವಾಗಿ ಜೆಡಿಎಸ್‌ಗೆ ಹೋಗಿದ್ದೆ. ಅಲ್ಲಿಯ ವಾತಾವರಣ ನೋಡಿ ವಿಜಯಪುರ – ಬಾಗಲಕೋಟೆ ಎಂಎಲ್‌ಸಿಗೆ ಪಕ್ಷೇತರನಾಗಿ ನಿಂತು ಗೆದ್ದಿರುವೆ. ಅದನ್ನು ಮಾಡಬೇಕಾಗಿತ್ತು. ಕಾಂಗ್ರೆಸ್ ಸೇರಿ ಬಿಜೆಪಿಗೆ ದ್ರೋಹ ಬಗೆದಿದ್ದೀರಿ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

 

ಇದನ್ನೂ ಓದಿ: PM Kisan: ಯೋಜನೆಯ ಹಣ ದುಪ್ಪಟ್ಟು !

Leave A Reply

Your email address will not be published.