Think before you lend: ಸಾಲ ಕೊಡೋಕು ಮುಂಚೆ ಚಿಂತಿಸಿ ಹಣ ವಾಪಸ್ಸು ಬರುವತ್ತ : ಯಾಕಂದ್ರೆ ಈ ಟೈಮ್ ಅಲ್ಲಿ ಸಾಲ ನೀಡಿದ್ರೆ ಬರೋದೇ ಇಲ್ಲ ಹಣ!

Think before you lend: ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿನಂತೆ ಇಂದಿನ ಕಾಲದಲ್ಲಿ ಹಣ ಇಲ್ಲದೆ ಬದುಕಲು ಅಸಾಧ್ಯ. ದುಬಾರಿ ದುನಿಯಾದಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ಅವಶ್ಯವಾಗಿದೆ. ಕೆಲವೊಂದು ಬಾರಿ ಹಣ ಇಲ್ಲ ಎಂದಾಗ ಕೈ ಹಿಡಿಯುವುದೇ ಸಾಲ ಎಂಬ ದೊಡ್ಡ ಅಸ್ತ್ರ. ಆದ್ರೆ, ಎಷ್ಟೋ ಜನ ಇದರಿಂದ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡರೆ, ಇನ್ನೂ ಕೆಲವೊಂದಷ್ಟು ಜನ ಸಮಸ್ಯೆಗೆ ಸಿಲುಕುತ್ತಾರೆ.

ಹೌದು. ಸಾಲವನ್ನು ಪಡೆಯುವಾಗ ತುಂಬಾ ಯೋಚನೆ ಮಾಡುವುದು ಉತ್ತಮ. ಕೆಲವೊಂದು ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಶಾಸ್ತ್ರದ ಪ್ರಕಾರ ಸಾಲ ಪಡೆದುಕೊಳ್ಳಲು ಹಾಗೂ ಸಾಲ ನೀಡುವಾಗ ಕೆಲವೊಂದು ನಿಯಮಗಳಿದೆ. ಯಾವ ಸಮಯದಲ್ಲಿ ಸಾಲ(Think before you lend)ನೀಡುವುದು ಸೂಕ್ತ ಎಂಬುದು ಹೇಳಲಾಗಿದೆ. ಹಾಗಿದ್ರೆ ಬನ್ನಿ ಈ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅಮಾವಾಸ್ಯೆಯ ದಿನ ಸಾಲ ಕೊಡಬಾರದು:
ಈ ದಿನ ನೀಡಿದ ಸಾಲವು ನಿಮ್ಮ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು. ಎಂತಹದ್ದೇ ಪರಿಸ್ಥಿತಿಯಿರಲಿ ಅಥವಾ ಯಾರಾದರೂ ನಿಮಗೆ ಎಷ್ಟೇ ಆಪ್ತರಾಗಿರಲಿ.. ಅಮಾವಾಸ್ಯೆಯಂದು ಸಾಲ ಕೊಡಬೇಡಿ. ಅಮಾವಾಸ್ಯೆಯ ದಿನದಂದು ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿರುತ್ತವೆ ಎಂದು ನಂಬಲಾಗಿದೆ.

ಭದ್ರ ಕಾಲದಲ್ಲಿ ಸಾಲ:
ಭದ್ರ ಕಾಲ ಅಥವಾ ಭದ್ರ ಮುಹೂರ್ತವನ್ನು ಹಿಂದೂ ಧರ್ಮದಲ್ಲಿ ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ಭದ್ರ ಕಾಲದಲ್ಲಿ ಶುಭ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭದ್ರಳನ್ನು ಸೂರ್ಯ ದೇವರ ಮಗಳು ಮತ್ತು ಶನಿ ದೇವನ ಸಹೋದರಿ ಎಂದು ಕರೆಯಲಾಗುತ್ತದೆ. ಭದ್ರಳು ಶನಿದೇವನಂತೆಯೇ ಸ್ವಭಾವದಲ್ಲಿ ಅತಿಯಾದ ಕೋಪವನ್ನು ಹೊಂದಿರುವಳು. ಹೀಗಾಗಿ ಭದ್ರ ಕಾಲದಲ್ಲಿ (Bhadra Kaal) ಶುಭಕಾರ್ಯ ನಿಷಿದ್ಧ. ಭದ್ರಾ ಅವಧಿಯನ್ನು ಅಶುಭ ಕಾಲವೆಂದು ಪರಿಗಣಿಸಲಾಗುತ್ತದೆ. ಇದು ಭಿನ್ನಾಭಿಪ್ರಾಯಗಳು ಮತ್ತು ಸಂಘರ್ಷಗಳನ್ನು ಸೃಷ್ಟಿಸುತ್ತದೆ. ಈ ಸಮಯದಲ್ಲಿ ಹಣದ ವಹಿವಾಟುಗಳು, ಹಣವನ್ನು ಗಳಿಸುವಲ್ಲಿ ತೊಂದರೆ ಉಂಟುಮಾಡುತ್ತದೆ. ಜನರ ನಡುವಿನ ಸಂಬಂಧಗಳು ಹದಗೆಡುತ್ತವೆ.

ಮಂಗಳವಾರ ಸಾಲ ಕೊಟ್ಟರೆ ನಷ್ಟವಾಗುತ್ತದೆ:
ಮಂಗಳವಾರವೂ ಹಣದ ವ್ಯವಹಾರ ಮಾಡಬೇಡಿ. ಈ ಈ ದಿನದಂದು ಎರವಲು ಪಡೆಯುವುದನ್ನು ಪುರಾಣ ಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಹಳೆ ಸಾಲವಿದ್ದರೆ ಇಂದು ಸಾಲ ಪಡೆಯುವ ಬದಲು, ಮರುಪಾವತಿ ಮಾಡಬೇಕು. ದಿನದಂದು ಸಾಲ ಮಾಡುವುದರಿಂದ ಹಣದ ನಷ್ಟ ಮತ್ತು ಆರ್ಥಿಕ ಸ್ಥಿತಿ ಹದಗೆಡುತ್ತದೆ. ಇಂದು ತೆಗೆದುಕೊಂಡ ಸಾಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಮರುಪಾವತಿ ಮಾಡಿದ ಸಾಲವು ಮಂಗಳಕರವಾಗಿದೆ.

ಬುಧವಾರ ಹಣವನ್ನು ಸಾಲವಾಗಿ ನೀಡಬೇಡಿ:
ಬುಧವಾರ ಗಣಪತಿಯನ್ನು ಪೂಜಿಸುವ ದಿನ. ಉತ್ತಮ ಲಾಭದ ಅಧಿಪತಿ ಗಣೇಶ. ಹಾಗಾಗಿ ಯಾವುದೇ ಸಂದರ್ಭದಲ್ಲಿಬುಧವಾರ ಸಾಲ ನೀಡಬೇಡಿ. ಈ ರೀತಿ ಮಾಡಿದರೆ ಗಣಪತಿಗೆ ಕೋಪ ಬರುತ್ತದೆ ಎಂಬ ನಂಬಿಕೆ ಇದೆ. ಇಂದು ಸಾಲ ನೀಡಿದ ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ನಂಬಲಾಗಿದೆ.

 

ಇದನ್ನು ಓದಿ : Sand under the train: ರೈಲಿನ ಕೆಳಗೆ ಮರಳು ತುಂಬಿಸಿಟ್ಟ ಪೆಟ್ಟಿಗೆ ಇರುತ್ತೆ, ಯಾಕೆ ಗೊತ್ತಾ? 

Leave A Reply

Your email address will not be published.