BJP 3rd List: ಬಿಜೆಪಿಯ ಬಹು ನಿರೀಕ್ಷಿತ 3 ನೇ ಪಟ್ಟಿ ಬಿಡುಗಡೆ, ಜಗದೀಶ್ ಶೆಟ್ಟರ್ ಕ್ಷೇತ್ರಕ್ಕೆ ಅಚ್ಚರಿಯ ಹೆಸರು !

BJP 3rd List: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಬಹು ನಿರೀಕ್ಷಿತ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು10 ಜನರ ಪಟ್ಟಿ ಇದಾಗಿದೆ.
ಜಗದೀಶ್ ಶೆಟ್ಟರ್ ಶಾಸಕರಾಗಿದ್ದ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಮಹೇಶ್ ತೆಂಗಿನಕಾಯಿ ಹೆಸರು ಘೋಷಿಸಲಾಗಿದೆ.

ಇನ್ನು ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ರಾಮದಾಸ್ ಗೆ (Ramdas missed the ticket) ಟಿಕೆಟ್ ಕೈತಪ್ಪಿ ಶ್ರೀವತ್ಸ ಎಂಬುವರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ಜಗದೀಶ್ ಶೆಟ್ಟರ್ ಪಕ್ಷ ಬಿಡಲು ಕಾರಣವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅನ್ನು ಮಹೇಶ್ ತೆಂಗಿನಕಾಯಿಗೆ ನೀಡಲಾಗಿದೆ. ಹೆಬ್ಬಾಳದಿಂದ ಕಟ್ಟಾ ಜಗದೀಶ್, ನಗ್ತಾನ್ ನಿಂದ ಸಂಜೀವ್ ಐಹೊಳೆ, ಸೆಡಂನಿಂದ ರಾಜಕುಮಾರ್ ಪಾಟೀಲ್, ಕೊಪ್ಪಳದಿಂದ ಮಂಜುಳಾ ಅಂಬರೀಶ್, ರೋಣಾದಿಂದ ಕಳಕಪ್ಪ ಬಂಡಿ, ಹಗರಿ ಬೊಮ್ಮನಹಳ್ಳಿಯಿಂದ ಬಿ. ರಾಮಣ್ಣ, ಗೋವಿಂದರಾಜನಗರದಿಂದ ಉಮೇಶ್ ಶೆಟ್ಟಿ ಹೆಸರು ಘೋಷಣೆಯಾಗಿದೆ.

ಎಲ್ಲಾ 10 ಜನರ ಲಿಸ್ಟ್ ಇಲ್ಲಿದೆ ನೋಡಿ.

ಕೊಪ್ಪಳ- ಮಂಜುಳಾ ಅಮರೇಶ್

ರೋಣ- ಕಳಕಪ್ಪ ಬಂಡಿ
ಸೇಡಂ- ರಾಜಕುಮಾರ್ ಪಾಟೀಲ್
ನಾಗಠಾಣ- ಸಂಜೀವ್ ಈಹೊಳೆ
ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ

ಕೊಪ್ಪಳ- ಮಂಜುಳಾ ಅಮರೇಶ್
ರೋಣ- ಕಳಕಪ್ಪ ಬಂಡಿ
ಸೇಡಂ- ರಾಜಕುಮಾರ್ ಪಾಟೀಲ್
ನಾಗಠಾಣ- ಸಂಜೀವ್ ಈಹೊಳೆ
ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ
ಹಗರಿ ಬೊಮ್ಮನಹಳ್ಳಿ – ಬಿ. ರಾಮಣ್ಣ
ಹೆಬ್ಬಾಳ – ಕಟ್ಟಾ ಜಗದೀಶ್
ಗೋವಿಂದರಾಜ್ ನಗರ – ಉಮೇಶ್ ಶೆಟ್ಟಿ
ಮಹದೇವಪುರ – ಮಂಜುಳಾ ಅರವಿಂದ್ ಲಿಂಬಾವಳಿ
ಕೃಷ್ಣರಾಜ – ಶ್ರೀ ವತ್ಸ

ಒಟ್ಟು 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಟಿಕೆಟ್ ಅನ್ನು ಬಿಜೆಪಿ ಘೋಷಿಸಿದ್ದು ಇನ್ನು ಕೇವಲ 2 ಸೀಟುಗಳ ಘೋಷಣೆ ಬಾಕಿ ಇದೆ. ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಕಾತುರ ಅಧಿಕವಾಗಿದೆ.

 

 

 

Leave A Reply

Your email address will not be published.