Jyotirlinga Darshan : ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ IRCTC ಕಡೆಯಿಂದ ವಿಶೇಷ ಆಫರ್! ಮಿಸ್ ಮಾಡದಿರಿ!

Jyotirlinga Darshan : ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದೆ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕೆಂದು ನಮ್ಮ ದೇಶದ ಅನೇಕ ಜನರು ಪ್ರಯಾಣ ಬೆಳೆಸುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ (Jyotirlinga Darshan) ಪಾಟ್ನಾ ವಿಶೇಷ ರೈಲನ್ನು ನಡೆಸುತ್ತಿದ್ದು, ಇದು ಮೇ 20 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುತ್ತದೆ. ಈ ರೈಲು ಬಿಹಾರದ ವಿವಿಧ ನಿಲ್ದಾಣಗಳ ಮೂಲಕ ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನವನ್ನು ಮಾಡಬಹುದು.

ಸದ್ಯ IRCTCಯ ಈ ಪ್ಯಾಕೇಜ್‌ನಲ್ಲಿ ನೀವು ಕಡಿಮೆ ಹಣದಲ್ಲಿ ಜ್ಯೋತಿರ್ಲಿಂಗಗಳ ದರ್ಶನದ ಪ್ರಯೋಜನವನ್ನು ಪಡೆಯಬಹುದು. ಈ ಸಂಪೂರ್ಣ ಪ್ರಯಾಣವು 11 ರಾತ್ರಿಗಳು ಮತ್ತು 12 ಹಗಲುಗಳವರೆಗೆ ಇರುತ್ತದೆ. ಜ್ಯೋತಿರ್ಲಿಂಗದ ಜೊತೆಗೆ ಸ್ಟ್ರಾಚ್ಯ ಆಫ್ ಯೂನಿಟಿ, ಶಿರಡಿ ಸಾಯಿಬಾಬಾ ದೇವಾಲಯದ ದರ್ಶನ ಪಡೆಯಬಹುದು. ಈ ಸಂಪೂರ್ಣ ಪ್ರಯಾಣದಲ್ಲಿ ಭಕ್ತರಿಗೆ ಹಲವು ಸೌಲಭ್ಯಗಳು ದೊರೆಯಲಿವೆ.

ಮೇ 20 ರಂದು ಕೋಲ್ಕತ್ತಾದಿಂದ ಪ್ರಯಾಣ ಆರಂಭವಾಗಲಿದ್ದು, ಬಿಹಾರದ ಭಾಗಲ್ಪುರ್, ಮುಜಫರ್ ಪುರ್, ಕಿಯುಲ್, ಬರೌನಿ, ಸಮಸ್ತಿಪುರ್, ಹಾಜಿಪುರ್, ಪಾಟ್ಲಿಪುತ್ರ, ಅಗ್ರಾ ಮತ್ತು ಬಕ್ಸರ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಲು ಮತ್ತು ಇಳಿಸಲು ವ್ಯವಸ್ಥೆ ಮಾಡಲಾಗುವುದು.

ಈ ರೈಲು ಮೇ 20 ರಿಂದ 31 ರವರೆಗೆ ಸಂಚರಿಸಲಿದೆ. ಪ್ರವಾಸವು ಕೋಲ್ಕತ್ತಾದಿಂದ ಮೇ 20 ರಂದು ಮಧ್ಯಾಹ್ನ 13:00 ಗಂಟೆಗೆ ಪ್ರಾರಂಭವಾಗುತ್ತದೆ. 22:35 ಗಂಟೆಗೆ ಬಿಹಾರದ ಭಾಗಲ್ಪುರವನ್ನು ತಲುಪುತ್ತದೆ.

ಮೇ 21 ರಂದು ಮಧ್ಯಾಹ್ನ 1:45 ಕ್ಕೆ ಕಿಯುಲ್ ತಲುಪುತ್ತದೆ. ಮಧ್ಯಾಹ್ನ 2:50ಕ್ಕೆ ಬರೌನಿ, 4:55 ಕ್ಕೆ ಸಮಸ್ತಿಪುರ್, 6:15ಕ್ಕೆ ಮುಜಾಫರ್‌ಪುರ, 7:20 ಕ್ಕೆ ಹಾಜಿಪುರ, ರಾತ್ರಿ 8:25 ಕ್ಕೆ ಪಾಟ್ಲಿಪುತ್ರ ನಿಲ್ದಾಣ, ರಾತ್ರಿ 9:30 ಕ್ಕೆ ಅರಾ, 10:30 ಕ್ಕೆ ಬಕ್ಸರ್ ತಲುಪುತ್ತದೆ.

ನೀವು ಸಹ ಈ ಪ್ರವಾಸದ ಭಾಗವಾಗಲು ಬಯಸಿದರೆ, ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಸನಗಳು ಸೀಮಿತವಾಗಿವೆ ಎಂಬುದನ್ನು ನಿಮ್ಮ ಗಮನಕ್ಕಿರಲಿ. ಆದ್ದರಿಂದ ನೀವು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬೇಕು.

ಈ ವಿಶೇಷ ರೈಲಿನಲ್ಲಿ ಭಾರತದ ಜ್ಯೋತಿರ್ಲಿಂಗಗಳ ದರ್ಶನಕ್ಕೆ 20 ಸಾವಿರದಿಂದ 41 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ರೈಲಿನಲ್ಲಿ ಸ್ಲಿಪರ್‌ಗೆ 315, 3ಎಸಿಗೆ 297 ಮತ್ತು 2ಎಸಿಗೆ 44 ಸೇರಿದಂತೆ ಒಟ್ಟು 656 ಸೀಟುಗಳಿವೆ.

ಅದರಂತೆ, ಸ್ಲಿಪರ್‌ಗೆ 20,060, 3ACಗೆ 31,800 ಮತ್ತು 2ACಗೆ 41600 ಖರ್ಚು ಮಾಡಬೇಕಾಗುತ್ತದೆ. ವಸತಿ, ಆಹಾರ, ಪ್ರಯಾಣ ಸೇರಿದಂತೆ ಎಲ್ಲ ಸೌಲಭ್ಯಗಳು ಈ ಹಣದಲ್ಲೇ ಲಭ್ಯವಾಗಲಿದೆ.

ಈ ಸಂಪೂರ್ಣ ಯಾತ್ರೆಯಲ್ಲಿ ಮಹಾಕಾಳೇಶ್ವರ, ಓಂಕಾರೇಶ್ವರ, ಸೋಮನಾಥ, ನಾಗೇಶ್ವರ, ತ್ರಯಂಬಕೇಶ್ವರ, ಏಕತಾ ಪ್ರತಿಮೆ, ಶಿರಡಿ ಸಾಯಿಬಾಬಾ, ಶನಿ ಶಿಂಗಣಾಪುರಗಳ ಮುಂತಾದ ಕ್ಷೇತ್ರ ದರ್ಶನ ಪಡೆಯಬಹುದು.

 

ಇದನ್ನು ಓದಿ : Language controversy in Bengaluru : ಬೆಂಗಳೂರಲ್ಲಿ ನಿಲ್ಲದ ಭಾಷಾ ವಿವಾದ : ಕನ್ನಡ ಬರಲ್ಲ ಎಂದ ಚಾಲಕನೊಂದಿಗೆ ವಿಚಿತ್ರವಾಗಿ ವರ್ತಿಸಿದ ಟ್ರಾಫಿಕ್ ಪೊಲೀಸ್..! 

Leave A Reply

Your email address will not be published.