RCB -WPL: ಗೋವಾದಲ್ಲಿ RCB ಆಟಗಾರ್ತಿಯರ ಮೋಜು-ಮಸ್ತಿ! ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆ ಎಂದ ಅಭಿಮಾನಿಗಳು

RCB -WPL :ಮೊಟ್ಟ ಮೊದಲ ಬಾರಿಗೆ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ (Women’s Premier League) ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಅದರಲ್ಲೂ RCB ಅಭಿಮಾನಿಗಳಿಗಂತೂ ತುಸು ಹೆಚ್ಚೇ ಅನ್ನಬಹುದು. ಹರಾಜು ಪ್ರಕ್ರಿಯೆ ಮುಗಿದಂದಿನಿಂದ, ಕ್ಯಾಪ್ಟನ್ ಸೆಲೆಕ್ಟ್ ಆದಾಗಿನಿಂದ ಕಪ್​​ ಗೆಲ್ಲುವ ಕನಸು ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈ ವಿಶ್ವಾಸದಲ್ಲಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡ ಸೋಲುಗಳ ಸರದಾರವೆನಿಸಿ ಲೀಗ್​​​ ಹಂತದಲ್ಲೇ ಹೊರ ಬಿದ್ದಿದೆ.

ಹೌದು, WPL (RCB -WPL) ನಲ್ಲಿ ಆರ್​ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್​​​ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​​ಸಿಬಿ ತಂಡಕ್ಕೆ ವಿರಾಟ್​ ಕೊಹ್ಲಿ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಧೈರ್ಯ ತುಂಬಿದ್ದರು. ಇದಾದ ಬಳಿಕ ಬ್ಯಾಕ್​ ಟು ಬ್ಯಾಕ್​ ಎರಡು ಪಂದ್ಯಗಳನ್ನು ಗೆದ್ದ ಆರ್​​ಸಿಬಿ, ಲೀಗ್​ನ ಕೊನೆಯ ಪಂದ್ಯದಲ್ಲಿ ಮುಗ್ಗರಿಸಿ, ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿತು. ಹೀಗೆ ಸತತ ಸೋಲು ಕಂಡಿದ್ದು ಮಾತ್ರ ಅಭಿಮಾನಿಗಳನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಈ ಸೋಲುಗಳನ್ನು ಅಭಿಮಾನಿ ಬಳಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ (Smriti Mandhana), ಮುಂದಿನ ವರ್ಷ ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ಶಪಥ ಮಾಡಿದ್ದಾರೆ.

ಆದರೀಗ ಆರ್​​ಸಿಬಿ ಆಟಗಾರ್ತಿಯರ ನಡೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆಂದರೆ ತಂಡವು ಒಂದರಮೇಲೊಂದರಂತೆ ಸೋಲುಂಡು ಲೀಗ್​​​​ನಿಂದ ಹೊರ ಬಿದ್ದದ್ದು ಅಭಿಮಾನಿಗಳಿಗೆ ಭಾರೀ ಬೇಸರ ಉಂಟುಮಾಡಿದೆ. ಆ ಬೇಸರದಿಂದ ಇನ್ನೂ ಹೊರ ಬಂದಿಲ್ಲ. ಆದರೆ ಈ ಎಲ್ಲಾ ನೋವು ಮರೆತ ಆರ್​ಸಿಬಿ ಆಟಗಾರ್ತಿಯರು ಗೋವಾದ ಬೀಚ್​​​​ನಲ್ಲಿ ಬಿಂದಾಸ್​ ಆಗಿ ಎಂಜಾಯ್​ ಮಾಡುತ್ತಿದ್ದಾರೆ.
ಮೋಜು ಮಸ್ತಿಯಲ್ಲಿ ತೊಡಗಿದ ಮಂಧಾನ ಪಡೆ! ಇದು ಕೋಟ್ಯಾಂತರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಹೌದು, RCB ಆಟಗಾರ್ತಿಯರು ಸದ್ಯ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಾಯಕಿ ಸ್ಮೃತಿ ಮಂಧಾನ, ಎಲಿಸ್​ ಪೆರ್ರಿ, ಹೀದರ್​ ನೈಟ್​, ಸೋಫಿ ಡಿವೈನ್​, ಮೇಗನ್​ ಶುಟ್​, ಎರಿನ್​ ಬರ್ನ್ಸ್​ ಬೀಚ್​ವೊಂದರಲ್ಲಿ ತೆಗೆಸಿಕೊಂಡಿರುವ ಗ್ರೂಪ್​ ಫೋಟೋವೊಂದು ಸಖತ್​ ವೈರಲ್​ ಆಗುತ್ತಿದೆ. ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರ್ತಿಯರು, ಗೋವಾದಲ್ಲಿ ಬಿಂದಾಸ್​ ಆಗಿ ಎಂಜಾಯ್​ ಮಾಡುತ್ತಿದ್ದಾರೆ.

ಅಂದಹಾಗೆ ಇದನ್ನು ನೋಡಿದ ಫ್ಯಾನ್ಸ್​, ಸೋಷಿಯಲ್​​​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಲಿ ಕಪ್​​​​​​​​ ಗೆಲ್ಲಲು ಸಾಧ್ಯವಾಗಲ್ಲ, ಇದಕ್ಕಷ್ಟೇ ಸೀಮಿತ. ಆರ್‌ಸಿಬಿ ಅಭಿಮಾನಿಗಳ ಭಾವನೆಗಳೊಂದಿಗೆ ಆಡಿದ ನಂತರ ಅವರು ಈಗ ಗೋವಾದಲ್ಲಿ ಆಡುತ್ತಿದ್ದಾರೆ ಎಂದು ಭಾವಿಸುತ್ತೇವೆ, ಸ್ಮೃತಿ ಮಂಧಾನ ಇಲ್ಲೂ ಕೂಡ ಶೈನ್​ ಆಗಿಲ್ಲ, ಬೀಚ್​​​ನಲ್ಲಿ ಮಣ್ಣಿನ ಕಪ್​ ತಯಾರಿಸುತ್ತಿದ್ದಾರೆ, ಟೀಮ್​ ಜೋಕರ್ಸ್​ ಎಂದೆಲ್ಲಾ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Cooker Bomb Blast : ಕುಕ್ಕರ್‌ ಬಾಂಬ್‌ ಕಾರಣಕರ್ತ ಶಾರೀಕ್‌ ಕುರಿತು ಸ್ಫೋಟಕ ಮಾಹಿತಿ ಲೀಕ್‌!

Leave A Reply

Your email address will not be published.