Bantwala :ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಹುನ್ನಾರ, ನಾಲ್ವರ ಮನೆ ಮೇಲೆ ಎನ್‌ಐಎ ದಿಢೀರ್‌ ದಾಳಿ

PM Modi Program: ನಿರಂತವಾಗಿ ಹಣ ರವಾನೆ ಮಾಡಿ ಬ್ಯಾಂಕ್ ಖಾತೆಗಳಲ್ಲಿ ವ್ಯವಹಾರ ನಡೆಸುತ್ತಿದ್ದ ನಾಲ್ವರು ಆರೋಪಿಗಳ ಮೇಲೆ ಅನುಮಾನದ ಮೇರೆಗೆ ಹದ್ದಿನ ಕಣ್ಣಿಟ್ಟಿದ ಎನ್​ಐಎ( NIA) ತಂಡಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮಂಗಳೂರನ್ನು ಭಯೋತ್ಪಾದಕರು ತಮ್ಮ ಕಾರ್ಯಾಚರಣೆಯ ಅಡಗುತಾಣ ಮಾಡಿಕೊಳ್ಳುತ್ತಿರುವಂತೆ ತೋರುತ್ತಿದೆ. ಈಗಾಗಲೇ, ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆಸಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಈ ನಡುವೆ ಬಂಟ್ವಾಳದ (Bantwal, Mangaluru) ನಾಲ್ವರ ಮನೆ ಮೇಲೆ ಎನ್​ಐಎ ದಾಳಿ (NIA Raid) ನಡೆಸಿದ್ದು, ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾರ್ಯಕ್ರಮದ(PM Modi Program) ವೇಳೆ ಗಲಾಟೆ ಸೃಷ್ಟಿ ಮಾಡಲು ಆರ್ಥಿಕ ಹಣಕಾಸಿನ ನೆರವು (Finance Help) ನೀಡಿದ ಆರೋಪದ ಅಡಿಯಲ್ಲಿ ರವಿವಾರ ರಾತ್ರಿ ವೇಳೆ ಈ ದಾಳಿ ನಡೆದಿದೆ.

ಆರೋಪಿಗಳನ್ನು ನಂದಾವರ (Nandavara) ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್ ಮತ್ತು ನೌಫಲ್ ಎನ್ನಲಾಗಿದ್ದು, ಈ ನಾಲ್ವರು ಆರೋಪಿಗಳ ಮನೆ ಮೇಲೆ ಎನ್​ಐಎ ಅಧಿಕಾರಿಗಳು ರಾತ್ರಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ, ಎನ್​ಐಎ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಿದ್ದು, ಹೆಚ್ಚಿನ ತನಿಖೆಗಾಗಿ ಬಿಹಾರಕ್ಕೆ ಕರೆದೊಯ್ಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

Leave A Reply

Your email address will not be published.