Kantara : ʼಕಾಂತಾರʼ ಪಾರ್ಟ್‌-1ರಲ್ಲಿ ಏನಿರಲಿದೆ ಕಥೆ? ಇಲ್ಲಿದೆ ಹಲವು ಮಾಹಿತಿ

Kantara Movie: ‘ಕಾಂತಾರ’ ಸಿನಿಮಾ(Kantara Movie) ಸೂಪರ್ ಹಿಟ್ ಆದ ಬಳಿಕ ಕಾಂತಾರ -2 ತೆರೆ ಮೇಲೆ ಬರಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಗೆ ತೆರೆ ಎಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty). ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು. ಇದೇನಿದು ಎಲ್ಲಾ ಸಿನಿಮಾಗಳು ಪಾರ್ಟ್ 1(Kantara part-1) ಆದ ಬಳಿಕ ಪಾರ್ಟ್ 2 ಬರೋದು. ಇದೇನು ಪೂರ್ವಕಥೆ ತೆರೆ ಮೇಲೆ ಬರುವುದು ಎಂದು ಹಲವರು ಯೋಚನಾಮಗ್ನರಾಗಿದ್ದರು. ಸದ್ಯ, ಪ್ರಿಕ್ವೆಲ್‌ ಟ್ರೆಂಡ್ ಸ್ಯಾಂಡಲ್‌ವುಡ್‌ (Sandlwood Prequel Trend)ನಲ್ಲಿ ಆರಂಭವಾಗಿದೆ.

ಸಿನಿಮಾದ ಪಾರ್ಟ್- 1 ಕ್ಲೈಮ್ಯಾಕ್ಸ್‌(kantara movie climax) ಅನ್ನು ಕುತೂಹಲಕಾರಿ ಟ್ವಿಸ್ಟ್‌ನೊಂದಿಗೇ ಮುಗಿಸುತ್ತಾರೆ. ಅಲ್ಲಿಂದ ಮುಂದಿನ ಕಥೆಯನ್ನು ಸಿಕ್ವೇಲ್‌ನಲ್ಲಿ ಹೇಳಲಾಗುತ್ತದೆ. ಕಥೆ ಆರಂಭಕ್ಕೂ ಮುನ್ನ ಏನಾಗಿತ್ತು ಎಂಬುದಾಗಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿಯೂ ಈ ಪ್ರಿಕ್ವೇಲ್‌ ಟ್ರೆಂಡ್‌ ಜೋರಾಗಿದ್ದು, ಹಲವು ಸಿನಿಮಾಗಳು ಈ ರೀತಿ ತೆರೆ ಮೇಲೆ
ಬರಲು ಸಜ್ಜಾಗಿದೆ.

ಎಲ್ಲೆಡೆ ಸಂಚಲನ ಮೂಡಿಸಿರುವ ಕಾಂತಾರ ಸಿನಿಮಾದ ಶತದಿನದ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ‘ಕಾಂತಾರ’ ಸಿನಿಮಾದ ಪ್ರಿಕ್ವೇಲ್‌ ಬರುವುದಾಗಿ ಹೇಳಿದ್ದರು. ಹಾಗಾಗಿ ಇದು ‘ಕಾಂತಾರ-2’ ಆಗುವುದಿಲ್ಲ, ಬದಲಿಗೆ ‘ಕಾಂತಾರ-1’ ಆಗುತ್ತದೆ. ಮುಂದುವರಿದ ಭಾಗ ಕಾಂತಾರ ಪಾರ್ಟ್ -1 ಆಗಲಿದೆ ಎಂದಿದ್ದರು. ಹಾಗೆಯೇ ‘ಕಾಂತಾರ’ ಸಿನಿಮಾದ ಆರಂಭದಲ್ಲಿ ಕಾಡಿನೊಳಗೆ ಓಡಿ ಹೋಗುವ ದೈವ ಏನಾಗುತ್ತದೆ ಎಂಬ ಕಥೆಯನ್ನು ರಿಷಬ್‌(rishab) ಇದರ ಪ್ರಿಕ್ವೇಲ್‌ನಲ್ಲಿ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ಜನರಲ್ಲೂ ಕುತೂಹಲ ಮೂಡಿಸಿದ್ದು, ಕಾಂತಾರ ಪ್ರಿಕ್ವೇಲ್‌ನಲ್ಲಿ ಕಥೆ ಏನಿರಬಹುದು? ಹೇಗಿರಬಹುದು? ಇಂತಹ ಹಲವು ಕುತೂಹಲಕಾರಿ ಪ್ರಶ್ನೆಗಳು ಸಿನಿಪ್ರೇಕ್ಷಕರಲ್ಲಿ ಮೂಡಿದೆ.

ಇನ್ನು, ಶಿವರಾಜ್‌ಕುಮಾರ್‌(actor Shiva Rajkumar ) ಮತ್ತು ನರ್ತನ್‌(nartan) ಕಾಂಬಿನೇಶನ್‌ನಲ್ಲಿ ಮೂಡಿ ಬಂದಿದ್ದ ‘ಮಫ್ತಿ’(Mufti) ಸಿನಿಮಾ ಸೂಪರ್‌ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ ನಟ ಶ್ರೀಮುರಳಿ(Sri Murali) ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಪಾತ್ರವನ್ನು ನಿರ್ವಹಿಸಿದ್ದರು, ಹಾಗೆ ಈ ಪಾತ್ರ ಹಲವರಿಗೆ ಮೆಚ್ಚುಗೆ ಆಯಿತು.

ಸದ್ಯ ನಿರ್ದೇಶಕರು ಶಿವರಾಜ್‌ಕುಮಾರ್‌ ಪಾತ್ರವನ್ನೆ ಸಿನಿಮಾ ಮಾಡಲು ಹೊರಟಿದ್ದಾರೆ. ‘ಭೈರತಿ ರಣಗಲ್‌’ (bhairati ranagal) ಸಿನಿಮಾ ಅಧಿಕೃತವಾಗಿ ಅನೌನ್ಸ್‌ ಆಗಿದ್ದು, ಇದರಲ್ಲಿ ಶಿವರಾಜ್‌ಕುಮಾರ್‌ ರೋಣಾಪುರದ ರಾವಣನಾಗಿ ಮತ್ತೆ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ‘ಮಫ್ತಿ’ ಸಿನಿಮಾದಲ್ಲಿ ನಟ ಶ್ರೀಮುರಳಿ ರೋಣಾಪುರಕ್ಕೆ ಬಂದ ಮೇಲಿನ ಕಥೆ ಇದೆ. ಅದಕ್ಕೂ ಮೊದಲು ಭೈರತಿ ಎಂಬ ರಾವಣ ಹುಟ್ಟಿದ್ದು ಹೇಗೆ? ಅವನ ಬದುಕು ಹೇಗಿತ್ತು? ಎಂಬುದನ್ನು ‘ಭೈರತಿ ರಣಗಲ್‌’ ಸಿನಿಮಾದ (bhairati ranagal movie) ಮೂಲಕ ತೋರಿಸಲು ನರ್ತನ್‌ ಸಜ್ಜಾಗಿದ್ದಾರೆ. ಅಂದರೆ ಇದು ‘ಮಫ್ತಿ’ಗಿಂತಲೂ ಮೊದಲಿನ ಕಥೆಯಾಗಿದೆ. ಪ್ರಿಕ್ವೆಲ್‌ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ರ ಮಫ್ತಿ ಲುಕ್‌ ಮುಂದುವರೆಯಲಿದೆ ಎಂದು ನಿರ್ದೇಶಕ ನರ್ತನ್ ಹೇಳಿದ್ದಾರೆ.

Leave A Reply

Your email address will not be published.