ಪ್ರೇಮಿಗಳೇ ನಿಮ್ಮ ಮೇಲೊಂದು ಹದ್ದಿನ ಕಣ್ಣು – ಪ್ರಮೋದ್ ಮುತಾಲಿಕ್

ದೇಶಾದ್ಯಂತ ಫೆಬ್ರವರಿ 14 ನೆ ತಾರೀಖು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಎಲ್ಲೇ ಕಂಡರೂ ಲವ್ ಬರ್ಡ್ಸ್ ಗಳಂತೆ ಪ್ರೇಮಿಗಳು ಕ್ಲಬ್, ಪಾರ್ಕ್ ಎಂದು ಎಲ್ಲ ಕಡೆ ಸಂಭ್ರಮಾಚರಣೆ ಮಾಡೋದು ಕಾಮನ್. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಈ ಆಚರಣೆಗಳಿಗೆ ಮೊದಲಿಂದಲೂ ವಿರೋಧ ವ್ಯಕ್ತವಾಗುತ್ತಲೆ ಇದೆ. ಈ ನಡುವೆ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ರೀತಿ ಆಚರಣೆ ವಿರುದ್ಧ ಹರಿಹಾಯ್ದಿದ್ದು ಎಚ್ಚರಿಕೆ ಕೂಡ ನೀಡಿದ್ದಾರೆ.

ನಮ್ಮಲ್ಲಿ ನಮ್ಮ ಸಂಸ್ಕೃತಿಯನ್ನು ಪೋಷಿಸುವುದಕ್ಕಿಂತ ಹೆಚ್ಚಾಗಿ ಪಾಶ್ಚಿಮಾತ್ಯ ಆಚರಣೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಪ್ರತಿವರ್ಷ ಪ್ರೇಮಿಗಳ‌ ದಿನಾಚರಣೆಯನ್ನು ವಿರೋಧಿಸುತ್ತಾ ಬಂದಿದ್ದು, ಅದೇ ರೀತಿ ಈ‌ ಬಾರಿಯೂ ಕೂಡ ರಾಜ್ಯಾದ್ಯಂತ ಪೊಲೀಸರ ಸಹಕಾರದ ಜೊತೆಗೆ ಈ ಆಚರಣೆಗೆ ಪ್ರಮೋದ್ ಮುತಾಲಿಕ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪಾರ್ಕ್ , ಪಾರ್ಲರ್, ಹೋಟೆಲ್​ಗಳ ಹೆಚ್ಚಿನ ಗಮನ ನೀಡಲಾಗುವ ಜೊತೆಗೆ ಹದ್ದಿನ ಕಣ್ಣಿಡುವ ಕುರಿತು ಮಾಹಿತಿ ನೀಡಿದ ಮುತಾಲಿಕ್ ಅವರು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ನಡೆಯುವ ಡ್ರಗ್, ಸೆಕ್ಸ್ ಮಾಫಿಯಾವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಾಳೆ ಕ್ಲಬ್,ಪಾರ್ಕ್, ಪಾರ್ಲರ್, ಹೋಟೆಲ್ ಗಳ ಸುತ್ತ ಕಣ್ಗಾವಲು ಇರುವ ಬಗ್ಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ, ಪ್ರತಿಯೊಂದು ಕಾರ್ಯವನ್ನು ಕಾನೂನು ಬದ್ದವಾಗಿಯೆ ಮಾಡುವುದಾಗಿ ಪ್ರಮೋದ್ ಮುತಾಲಿಕ್ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.