ಮಂಗಳೂರು: ಹೃದಯಾಘಾತಕ್ಕೆ ಪೊಲೀಸ್ ಸಿಬ್ಬಂದಿ ಬಲಿ!!

ಮಂಗಳೂರು:ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಹನುಮಂತ ನಾಯ್ಕ್ ಅವರು ಹೃದಯಾಘಾತದಿಂದ ನಿಧನರಾದರು.

2008 ರ ಬ್ಯಾಚ್ ನಲ್ಲಿ ಇಲಾಖೆಗೆ ಸೇರಿಕೊಂಡಿದ್ದ ಅವರು ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ ಕಳೆದ ಎರಡು ವರ್ಷಗಳಿಂದ ಕಾವೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.ಕಳೆದ ಕೆಲ ದಿನಗಳ ಹಿಂದೆ ರಜೆ ಪಡೆದು ಊರಿಗೆ ತೆರಳಿದ್ದ ಅವರು ಇಂದು ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಇಲಾಖೆಯಲ್ಲಿ ಓರ್ವ ಉತ್ತಮ ಸಿಬ್ಬಂದಿಯಾಗಿದ್ದ ಹನುಮಂತ ಅವರ ಸಾವಿನ ಸುದ್ದಿ ತಿಳಿದ ಇತರ ಸಿಬ್ಬಂದಿಗಳು ಹಾಗೂ ದಕ್ಷ ಪ್ರಾಮಾಣಿಕ ಸಿಬ್ಬಂದಿಯನ್ನು ಕಳೆದುಕೊಂಡ ಇಲಾಖೆ ಕಂಬನಿ ಮಿಡಿದಿದೆ. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

Leave A Reply

Your email address will not be published.