Kantara : ಕಾಂತಾರ ಸಕ್ಸಸ್ ರಿಷಬ್ ಶೆಟ್ರ ತಲೆಗೇರಿತಾ ? ಮತ್ಯಾಕೆ ಹಿಂಗಂದ್ರು ಶೆಟ್ರು?

ಎಲ್ಲೆಡೆ ಸಂಚಲನ ಮೂಡಿಸಿರುವ ಕಾಂತಾರ ಸಿನೆಮಾದ ಬಗ್ಗೆ ವಿವರಣೆ ನೀಡುವ ಅವಶ್ಯಕತೆಯೇ ಉಳಿದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ವಿಶ್ವಾದ್ಯಂತ ತನ್ನ ಹವಾ ಸೃಷ್ಟಿಸಿ ಕರ್ನಾಟಕ ಬಿಡಿ ಹೊರ ದೇಶದಲ್ಲೂ ಕೂಡ ಬಾಕ್ಸ್ ಆಫೀಸಲ್ಲಿ ಕಮಾಯಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದೆ. ಥಿಯೇಟರ್ ನಲ್ಲಿ ನೋಡಿದ್ದು ಮಾತ್ರವಲ್ಲದೇ ಅಮೆಜಾನ್ ಪ್ರೈಮ್ ನಲ್ಲಿಯೂ ಕೂಡ ಜನ ಸಿನಿಮಾ ನೋಡಲು ಕಾತುರದಿಂದ ಎದುರು ನೋಡುತ್ತಿದ್ದ ಮಟ್ಟಿಗೆ ಸಿನಿಮಾ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ನಡುವೆ ರಾತ್ರೋ ರಾತ್ರಿ ರಿಷಬ್ ಶೆಟ್ಟಿ ಎಂಬ ನಟ, ನಿರ್ದೇಶಕನ ನಟನೆಗೆ ಫಿದಾ ಆಗಿ ಮೆಚ್ಚುಗೆಯ ಸುರಿಮಳೆ ಸುರಿಸಿ ಶುಭ ಹಾರೈಸುವ ಮಂದಿಗೇನು ಕಮ್ಮಿಯಿಲ್ಲ. ಬಾಲಿವುಡ್, ಟಾಲಿವುಡ್, ಎಲ್ಲ ಭಾಷೆಯಲ್ಲಿಯೂ ಹಿಟ್ ಆಗಿ, ಗಣ್ಯಾತಿ ಗಣ್ಯರು ಕೂಡ ,ಎಲ್ಲ ಚಿತ್ರರಂಗದ ಮೇರು ನಟರು ಕೂಡ ರಿಷಬ್ ನಟನೆಗೆ ದಿಲ್ ಖುಷ್ ಆಗಿ ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದ್ದು ತಿಳಿದಿರುವ ವಿಚಾರವೇ!!

ಈ ಗೆಲುವಿನಿಂದ ರಿಷಬ್ ಬದಲಾಗಿ ಬಿಟ್ಟಿದಾರಾ?? ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಆಗಿ ಬಿಟ್ಟ ನಟನ ತಲೆಯಲ್ಲಿ ಗೆದ್ದ ಖುಷಿಯಲ್ಲಿ ಅವರ ನಡೆಯಲ್ಲಿ ಬದಲಾವಣೆಯಾಗಿದೆಯೇ ಎಂಬ ಹೊಸ ವಿಚಾರ ಹರಿದಾಡುತ್ತಿದೆ.

ಸಕ್ಸಸ್ ಅನ್ನೋದು ಸಡನ್ ಆಗಿಯೇ ಮನುಷ್ಯನ ವ್ಯಕ್ತಿತ್ವ ವನ್ನು ಬದಲಾಯಿಸಿ, ನಾನೇ ಗ್ರೇಟ್ ಎಂಬ ಅಂಶ ತಲೆಗೆ ಏರಿ ಬಿಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಕೆಲವರನ್ನು ನಾವು ಗಮನಿಸಿರಬಹುದು.

ಸದ್ಯ ಸಕ್ಸಸ್ ಫುಲ್ ಆಗಿರುವ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ಟಿ ಅವರಿಗೆ ಸಕ್ಸಸ್ (Success) ತಲೆಗೆ ಏರಿದಿಯಾ? ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಚಿಂತನೆ ನಡೆಸುವುದಾದರೆ ಅಲ್ಲಿ ನಿಮಗೆ ಸಿಗೋ ಉತ್ತರ ವಿಭಿನ್ನವಾಗಿದೆ ಎನ್ನಬಹುದು!!!..ಅದು ನೆಗೆಟಿವಾ? ಅಥವಾ ಪಾಸಿಟಿವಾ? ಅಂತ ಯೋಚಿಸುತ್ತಿದ್ದೀರಾ !! ಉತ್ತರ ಹೇಳ್ತೀವಿ ಕೇಳಿ!!

ರಿಷಬ್ ಶೆಟ್ಟಿ ಚಿತ್ರ ಬದುಕಿನಲ್ಲಿ ಸುದೀರ್ಘವಾಗಿ ದುಡಿದು, ಅನೇಕ ಚಿತ್ರ ಬದುಕಿನಲ್ಲಿ ಮಿಶ್ರ ಪ್ರತಿಕ್ರಿಯೆಯ ಜೊತೆಗೆ ಏರಿಳಿತ ಗಳನ್ನು ಕಂಡಿದ್ದಾರೆ. ಸದ್ಯ ಫ್ಯಾನ್ ಇಂಡಿಯಾ ಆಗಿ ಮಿಂಚುತ್ತಿದ್ದು, ಸಿಮಿಮಾದ ಬಗ್ಗೆ ನಿರೀಕ್ಷೆಯೆ ಮಾಡದೇ ಇದ್ದ ಸಿನಿಮಾ ನಿರೀಕ್ಷೆಯ ಎಲ್ಲೆಯ ಮೀರಿ ಸಿನಿಮಾ ಭರ್ಜರಿ ಗೆಲುವಿನ ನಗೆ ಬೀರುತ್ತಿದ್ದ ರಿಷಬ್ ಶೆಟ್ರು ಕಾಂತಾರ ಸಕ್ಸಸ್ ಅನ್ನ ತಲೆಗೆ ಹಚ್ಚಿಕೊಂಡೇ ಇಲ್ಲ ಎಂಬ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.

ಹೌದು, ರಿಷಬ್ ಶೆಟ್ರು ಯಾವುದನ್ನೂ ಕೂಡ ಲೆಕ್ಕಿಸದ ಹಾಗೇ ಕಂಡು ಬರುತ್ತದೆ. ಸ್ಟಾರ್ ಅನ್ನೋ ಫೀಲ್ ಕೂಡ ಇಲ್ಲ ಜೊತೆಗೆ ಕಾಂತಾರ ಭರ್ಜರಿ ರೆಸ್ಪಾನ್ಸ್ ಪಡೆದಾಗಿನಿಂದ ಹಿಡಿದು, ಇಲ್ಲಿಯ ತನಕ ಮುಂಚೆ ಇದ್ದ ನಡವಳಿಕೆಯೆ ಇದೆ..

ಕೊಂಚ ಕೂಡ ಗೆಲುವಿನ ಅಮಲು ನೆತ್ತಿಗೇರಿದಂತೆ ಕಾಣುತ್ತಿಲ್ಲ..ಬೇರೆ ಭಾಷೆಯಲ್ಲಿ ಮಾತನಾಡುವಾಗ ತೊಂದರೆ ಕೊಂಚ ಮಟ್ಟಿಗೆ ಉಂಟಾದರೂ ಕೂಡ , ತಮಗೆ ಹೇಳಬೇಕಾದ ವಿಚಾರವನ್ನೂ ತಮಗೆ ತಿಳಿದಂತೆ ಅದು ಅರೆ ಬರೇ ಹಿಂದಿಯಾದರೂ ಸರಿ ಬಾಲಿವುಡ್​ನಲ್ಲಿ ಕೂಡ ತಮ್ಮ ಅನಿಸಿಕೆಗಳನ್ನು ವಿಶ್ವಾಸದಿಂದ ಮುಕ್ತವಾಗಿ ಹೇಳುತ್ತಾ ಬಂದಿದ್ದಾರೆ.

ಗೆಲುವು ಪಡೆದೆ ಅನ್ನೋದು ಮನಸ್ಸಿನಲ್ಲಿ ಮಾತ್ರ ಇದ್ದರೆ ಒಳ್ಳೆಯದು ಎಂದಿರುವ ಡಿವೈನ್ ಸ್ಟಾರ್ ಅದು ತಲೆಗೆ ಏರಿದರೆ, ಮುಗಿದೇ ಹೋಗುತ್ತದೆ ಮತ್ತೆ ಎಲ್ಲ ಸಮಸ್ಯೆಗೆ ರಹ ದಾರಿಯಾಗಿ ಬಿಡುತ್ತದೆ. ಸಕ್ಸಸ್ ಅನ್ನೋದು ಮನಸ್ಸಿನಲ್ಲಿ ಮಾತ್ರ ಇರಬೇಕು ಎಂದಿದ್ದಾರೆ. ಜೊತೆಗೆ ಕಾಂತಾರ ಸಕ್ಸಸ್ ಮನಸ್ಸಿನಲ್ಲಿ ಮಾತ್ರ ಇದೆ ಎಂಬುದನ್ನೂ ಕೂಡ ಹೇಳುವುದನ್ನು. ಮರೆತಿಲ್ಲ!!!

ರಿಷಬ್ ಸಕ್ಸಸ್ ಅನ್ನೋದು ತುಂಬಾ ಡೇಂಜರಸ್ ಎಂದು ಹೇಳಿದ್ದು ಜೊತೆಗೆ ಅದು ತಲೆಗೆ ಏರಬಾರದು ಅಷ್ಟೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ರಿಷಬ್ ಶೆಟ್ಟಿ ತುಂಬಾ ಅನಿಸಿದನ್ನು ನೇರವಾಗಿ ಹೇಳುವ ವ್ಯಕ್ತಿತ್ವದವರಾಗಿದ್ದು, ಮುಚ್ಚು ಮರೆ ಇಲ್ಲದೆ ಇರುವ ವಿಷಯ ನೇರವಾಗಿ ಬಿಚ್ಚಿಡುವ ಗುಣ ಅವರದ್ದು.. ಇದರ ಜೊತೆಗೆ ವಿಚಾರಗಳನ್ನು ಹಂಚಿಕೊಳ್ಳುವಾಗ ನಗುವಿನ ಅಸ್ತ್ರ ಧರಿಸುವುದು ವಿಶೇಷ.

ರಿಷಬ್ ಶೆಟ್ಟಿ ನಿರಂತರ 15 ವರ್ಷಗಳಿಂದ ಸಿನಿಮಾ ರಂಗದಲ್ಲಿ ದುಡಿಯುತ್ತಾ ಬಂದಿದ್ದು, ಅದೇ ರೀತಿ ಕಾಂತಾರ ಸಿನಿಮಾಕ್ಕಾಗಿ ಕೂಡ ಶ್ರಮಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಹೇಗೆ ಶ್ರಮ ಹಾಕಿದ್ದರೋ ಅದೇ ಶ್ರಮದ ಪ್ರತಿಫಲ ಕಾಂತಾರ ಸಿನಿಮಾದ ಮೂಲಕ ದಕ್ಕಿದೆ.

ಹಾಗಾಗಿಯೇ ಯಾವುದನ್ನೂ ಹೆಚ್ಚಿಕೊಂಡಿಲ್ಲ ಅಂತ ರಿಷಬ್​ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.ಇದರ ನಡುವೆ ಕಾಂತಾರ 2 ಯಾವಾಗ ಬರಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದ್ದು, ಕಾಂತಾರ ಸಿನಿಮಾದ ಕೆಲಸ ಇನ್ನೂ ಬಾಕಿ ಉಳಿದಿದ್ದು, ಡಿಸೆಂಬರ್-02 ರಂದು ತುಳು ಭಾಷೆಯಲ್ಲಿ ಕಾಂತಾರ ರಿಲೀಸ್ ಆಗಲಿದೆ.

ಅದರ ಹೊರತಾಗಿ ಕಾಂತಾರ-2 ಸಿನಿಮಾದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಅನ್ನೋ ಅರ್ಥದಲ್ಲಿಯೇ ರಿಷಬ್ ರಿಯಾಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ರಿಷಬ್ ಶೆಟ್ಟಿ ತಮ್ಮ ಮನಸ್ಸಿನ ಮಾತುಗಳನ್ನ Times Now Navabharata ಕಾರ್ಯಕ್ರಮದ ಮೂಲಕ ಹಂಚಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ದಿ ಕಾಶ್ಮೀರಿ ಫೈಲ್ಸ್​ ಚಿತ್ರದ ಬಾಲಿವುಡ್​ ಹಿರಿಯ ನಟ ಅನುಪಮ್ ಖೇರ್ ಕೂಡ ಭಾಗಿಯಾಗಿದ್ದು, ಇವರ ಮಧ್ಯೆ ರೈಟರ್ ಚೇತನ್ ಭಗತ್ ಅವರು ಕೂಡ ಇದ್ದರು ಇಲ್ಲಿ “End of Bollywood Monopoly” ವಿಷಯದ ಬಗ್ಗೆ ಚರ್ಚೆ ಆದ ಸಂದರ್ಭ ರಿಷಬ್ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.