ಜ್ಯೋತಿಷಿಯ ಮಾತು ನಂಬಿ ಪ್ರಿಯಕರನಿಗೇ ವಿಷ ಕೊಟ್ಟ ಪ್ರಿಯತಮೆ | ಪ್ರೇಯಸಿಯ ಬಣ್ಣದ ಮಾತಿಗೆ ಜೀವ ತೆತ್ತ ಮುಗ್ಧ ಯುವಕ!!!

ಜ್ಯೋತಿಷಿಯ ಭವಿಷ್ಯ ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕನಿಗೇ ಜ್ಯೂಸಿನಲ್ಲಿ ವಿಷ ಕೊಟ್ಟ ಘಟನೆಯೊಂದು ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹೌದು ವಿಷದ ಜ್ಯೂಸ್ ಕುಡಿಸಿ ಪ್ರಿಯಕರನ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದ ನರಬಲಿ ಪ್ರಕರಣದ ಬಳಿಕ ತಿರುವನಂತಪುರದ ಪರಶಾಲಾದಲ್ಲಿ ಮತ್ತೊಂದು ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಶರೋನ್ ಎಂಬಾತನೇ ಕೊಲೆಯಾದ ಪ್ರಿಯಕರ. ಗ್ರೀಷ್ಮಾ ಎಂಬಾಕೆಯೇ ಪ್ರಿಯಕರನ ಕೊಂದಿರುವ ಆರೋಪಿ ಯುವತಿ.

ಈ ಜೋಡಿ ಹಕ್ಕಿಗಳು ಇಬ್ಬರು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಯುವತಿಗೆ ಬೇರೊಂದು ಹುಡುಗನನ್ನು ಮದುವೆಗೆ ಗೊತ್ತು ಮಾಡಿದ್ದರು. ಕುಟುಂಬದವರು ಸೈನಿಕನೊಂದಿಗೆ ಮದುವೆ ಮಾಡಿಕೊಡಲು ನಿರ್ಧಾರ ಮಾಡಿದ್ದರು. ಆದರೆ ಪ್ರಿಯತಮನಿಗೆ ತನ್ನ ಪ್ರಿಯತಮೆಯಿಂದ ದೂರವಾಗಲು ಇಷ್ಟವಿರಲಿಲ್ಲ.

ಈ ನಡುವೆ ನವೆಂಬರ್‌ಗೂ ಮುನ್ನ ಮದುವೆ ನಡೆದರೆ ಪ್ರಿಯಕರ ಸಾಯುತ್ತಾನೆ ಎಂದು ಜ್ಯೋತಿಷಿಯು ಯುವತಿಗೆ ಹೇಳಿದ್ದರು ಎನ್ನಲಾಗ್ತಿದೆ. ಈ ವಿಷಯವನ್ನು ಯುವತಿಯು ಯುವಕನ ಗಮನಕ್ಕೆ ತಂದಿದ್ದಳು. ಆದರೂ ಸಹಿತ ಆಕೆಯನ್ನು ಬಿಡಲು ಯುವಕ ಒಪ್ಪಿರಲಿಲ್ಲವಂತೆ. ಹೀಗಾಗಿಯೇ ಜ್ಯೋತಿಷಿ ಹೇಳಿದ್ದ ಭವಿಷ್ಯ ನಂಬಿ ಮತ್ತು ಮೂಢನಂಬಿಕೆಯಿಂದಲೇ ಆಕೆ ಕೊಲೆಯ ನಿರ್ಧಾರಕ್ಕೆ ಬಂದಿದ್ದು, ಹಾಗೂ ಇದಕ್ಕೆ ಮನೆಯವರ ಬೆಂಬಲವೂ ಇದೆ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳು 14ರಂದು ಶರೋನ್ ತಮಿಳುನಾಡಿನ
ರಾಮವರ್ಮಂಚಿರಾದಲ್ಲಿರುವ ಯುವತಿಯ ಮನೆಗೆ ಹೋಗಿದ್ದ. ಅಲ್ಲಿ ಯುವತಿ ತಾಮ್ರದ ಸಲ್ವೇಟ್ ಬೆರೆಸಿದ ಜ್ಯೂಸ್ ನೀಡಿದ್ದಳು. ಅಲ್ಲದೇ, ಪ್ರತಿ ಬಾರಿಯೂ ಯುವತಿ
ಜೊತೆ ಹೊರಗೆ ಹೋದಾಗ ಶರೋನ್‌ಗೆ ಹೊಟ್ಟೆ ನೋವು
ಬರುತ್ತಿತ್ತು ಎಂದು ಯುವಕನ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.

ಹೀಗಾಗಿಯೇ ಪೊಲೀಸರು ಸುದೀರ್ಘ ಎಂಟು ಗಂಟೆಗಳ ಆರೋಪಿ ಗ್ರೀಷ್ಮಾಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ತನ್ನ ತಪ್ಪೋಪ್ಪಿಕೊಂಡಿದ್ದಾಳೆ. ಅಲ್ಲದೇ, ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರ ನಡುವಿನ ವಾಟ್ಸ್ ಆಯಪ್ ಚಾಟ್‌ಗಳು ಕೂಡ ಬೆಳಕಿಗೆ ಬಂದಿದ್ದು, ಜ್ಯೂಸ್ ಚಾಲೆಂಜ್ ಹೆಸರಿನಲ್ಲಿ ಶರೋನ್‌ಗೆ ಗ್ರೀಷ್ಮಾ ಜ್ಯೂಸ್ ಕುಡಿಸುತ್ತಿದ್ದಳು ಎಂದು ಗೊತ್ತಾಗಿದೆ. ಆದ್ದರಿಂದಲೇ ನಿತ್ಯ ವಿಷಪ್ರಾಶನ ಮಾಡಿ ಕೊಲೆಗೈದಿರುವುದು ದೃಢಪಟ್ಟಿದೆ.

Leave A Reply

Your email address will not be published.