ನಟ ಶಿವರಂಜನ್ ಮೇಲೆ ಫೈರಿಂಗ್ !

ಮಂಗಳವಾರ ( ನಿನ್ನೆ) ರಾತ್ರಿ ಚಿತ್ರನಟ,ಉದ್ಯಮಿ ಶಿವರಂಜನ್ ಬೋಳಣ್ಣನವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾರುತಿ ದೇವಸ್ಥಾನದ ಬಳಿ ನಡೆದಿದೆ.

‘ಅಮೃತಸಿಂಧು’ ಸಿನಿಮಾದಲ್ಲಿ ಅಭಿನಯಿಸಿದ್ದ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಈ ಗುಂಡಿನ ದಾಳಿ ನಡೆದಿದೆ.

ಬೈಲಹೊಂಗಲ ಪಟ್ಟಣದ ಮಾರುತಿ ದೇವಸ್ಥಾನದ ಬಳಿ ಇರುವ ಶಿವರಂಜನ್ ಬೋಳಣ್ಣವರ ಅವರ ಹಳೆಯ ಮನೆ ಬಳಿ 3-4 ಸುತ್ತು ಫೈರಿಂಗ್ ನಡೆದಿದೆ. ಬೈಕಿನಲ್ಲಿ ಬಂದಿದ್ದ ಇಬ್ಬರು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ.

ಆಸ್ತಿ ವಿಚಾರವಾಗಿ ಈ ಶೂಟೌಟ್ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ

Leave A Reply

Your email address will not be published.