ಮಂಗಳೂರು : ಬೈಕಂಪಾಡಿಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ!!!

ಮಂಗಳೂರು : ಬೈಕಂಪಾಡಿ ಬಳಿಯ
ಮೀನಕಳಿಯದಲ್ಲಿ ರೌಡಿಶೀಟರ್ ಓರ್ವನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಾ ಅಲಿಯಾಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ‌.

ಮೀನಕಳಿಯ ಬೀಚ್ ಬಳಿ ಇಂದು ( ಸೋಮವಾರ) ಸಂಜೆ ರಾಜಾ ಇದ್ದನೆಂಬ ಮಾಹಿತಿಯಿಂದ, ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಿಸಿಕೊಂಡು ಹೋಗಿ ತಲವಾರಿನಲ್ಲಿ ಕಡಿದು ಹತ್ಯೆ ಯತ್ನ ಮಾಡಿದ್ದಾರೆ. ಕೂಡಲೇ ಸ್ಥಳೀಯರು ವ್ಯಕ್ತಿಯನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

2019 ರಂದು ನಡೆದಿದ್ದ, ಸಂದೇಶ್ ಪೂಜಾರಿ ಎಂಬಾತನ ಕೊಲೆ ನಡೆದಿತ್ತು. ಸುರತ್ಕಲ್ ಬಾರೊಂದರಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದ್ದು ನಂತರ, ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶ್ ನನ್ನು ಕೊಲೆ ಮಾಡಿದ್ದರು. ನಂತರ ಸುರತ್ಕಲ್ ಪೊಲೀಸರು ರಾಜಾ ಅಲಿಯಾಸ್ ರಾಘವೇಂದ್ರ, ಗಣೇಶ್‌ ಮತ್ತು ಸೊಹೈಲ್ ಎಂಬ ಮೂವರನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

ನಂತರ, ಮನು ಗುಡ್ಡೆಕೊಪ್ಲ(40), ಶರತ್ ಅಲಿಯಾಸ್ ಮುನ್ನ(35), ಪ್ರವೀಣ್ ಕುಂದರ್(42), ದೀಪಕ್ ರಾಜ್(33) ಮತ್ತು ಮಿಥುನ್ (40) ಎಂಬವರನ್ನು ಪೊಲೀಸರು ಬಂಧಿಸಿದ್ದರು‌. ಈ ಪೈಕಿ ಪ್ರಮುಖ ಆರೋಪಿ ಮನೋಜ್, ಕೊಲೆಯಾಗಿದ್ದ ಸಂದೇಶ್ ಪೂಜಾರಿಯ ಸ್ನೇಹಿತನೇ ಆಗಿದ್ದ. ಇದೀಗ ಸಂದೇಶ್ ಸ್ನೇಹಿತರೇ ರಾಜಾನ ಮೇಲೆ ತಲವಾರು ದಾಳಿ ನಡೆಸಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

Leave A Reply

Your email address will not be published.