ಮಂಗಳೂರು : ಮಹಿಳೆಯರಿದ್ದ ಕೊಠಡಿಗೆ ನುಗ್ಗಿ ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ !

ಮಂಗಳೂರು: ಮಸೀದಿಯಲ್ಲಿ ಮಹಿಳೆಯರ ನಮಾಜು ಕೊಠಡಿಗೆ ನುಗ್ಗಿ ಅಲ್ಲಿದ್ದ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ವರ್ತಿಸಿದ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ಸುಜಿತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.

ಏ.28 ರಂದು ಮುಸ್ಲಿಂಮರ ಉಪವಾಸ ವೃತದ 27ನೇ ದಿನದ ವಿಶೇಷ ಉಪವಾಸ ಮತ್ತು ಜಾಗರಣೆ ಪ್ರಯುಕ್ತ ತೊಕ್ಕುಟ್ಟುವಿನ ಹುದಾ ಜುಮ್ಮಾ ಮಸೀದಿಯಲ್ಲಿ ಏರ್ಪಡಿಸಿದ್ದ ‘ಲೈಲಾತುಲ ಖದರ್’ ಎಂಬ ಕಾರ್ಯಕ್ರಮ ಇತ್ತು.

2 ಗಂಟೆಯ ಅಂದರೆ ಮಧ್ಯರಾತ್ರಿಯ ಸಮಯ ಮಸೀದಿಯಲ್ಲಿ ಮಹಿಳೆಯರು ನಮಾಜು ಮಾಡುವ ಕೊಠಡಿಗೆ ಏಕಾಏಕಿ ನುಗ್ಗಿದ ಸುಜೀತ್ ಅಲ್ಲಿದ್ದ ಹೆಣ್ಣು ಮಕ್ಕಳ ಕೈ ಹಿಡಿದು ಎಳೆದಿದ್ದಾನೆ. ಬಳಿಕ ಪ್ಯಾಂಟು ಜಾರಿಸಿ ಅಸಭ್ಯವಾಗಿ ವರ್ತಿಸಿ ಮಹಿಳೆಯರ ಮಾನಹಾನಿ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾನೆ.

ಈ ಬಗ್ಗೆ ಅಲ್ಲಿದ್ದ ಮಹಿಳೆಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿದ್ದ ಉಳ್ಳಾಲ ಪೊಲೀಸರು ಆರೋಪಿ ಸುಜೀತ್ ಶೆಟ್ಟಿಯನ್ನು
ಬಂಧಿಸಿದ್ದಾರೆ.

Leave A Reply

Your email address will not be published.