ಉಳ್ಳಾಲ : ಉರೂಸ್ ಕಾರ್ಯಕ್ರಮ ಜಾಯಿಂಟ್ ವ್ಹೀಲ್ ಕಟ್ ಆಗಿ ಮಕ್ಕಳಿಗೆ ಗಂಭೀರ ಗಾಯ!

ಉಳ್ಳಾಲ : ಉರೂಸ್ ಕಾರ್ಯಕ್ರಮದಲ್ಲಿ ವ್ಯಾಪಾರ ನಡೆಸುತ್ತಿದ್ದ ತೊಟ್ಟಿಲಿನಲ್ಲಿ ಮಕ್ಕಳು ಆಡುತ್ತಿದ್ದ ಸಂದರ್ಭದಲ್ಲಿ ಉಯ್ಯಾಲೆ ಬಿದ್ದು, ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ.

ಉರೂಸ್ ಪ್ರಯುಕ್ತಾ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಾಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದರು.

ಏಕಾಏಕಿ ವ್ಹೀಲ್ ಜಾಯಿಂಟ್ ಕಟ್ ಆದ ಪರಿಣಾಮ ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಮೂರು ಮಕ್ಕಳಿಗೆ ಸ್ವಲ್ಪ ಹೆಚ್ಚು ಗಾಯಗಳಾಗಿದ್ದು, ಒಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಉಮ್ಮರ್ ಫಾರೂಕ್ ( 42), ಮೊಹಮ್ಮದ್ ಆಯೂಬ್ ( 7), ಮಶಿಥಾ ( 18), ನೂರ್ ಜಹಾನ್ ( 36) ಸಲೇಕಾ ( 28) ಮತ್ತು ಸಮೀರ್ ( 41) ಎಂದು ಗುರುತಿಸಲಾಗಿದೆ. ಇತರರಿಗರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Leave A Reply

Your email address will not be published.