ಪುತ್ತೂರು : ದರ್ಬೆತ್ತಡ್ಕ ಸಿಡಿಲು ಬಡಿದು ಕೃಷಿಕ ಮೃತ್ಯು

ಪುತ್ತೂರು:ಅ.30ರ೦ದು ಸ೦ಜೆ ದರ್ಬೆತ್ತಡ್ಕದಲ್ಲಿ ಸಿಡಿಲು ಬಡಿದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ.

ದರ್ಬೆತ್ತಡ್ಕ ನಿವಾಸಿ ಕೃಷಿಕ ಪುರುಷೋತ್ತಮ ಪೂಜಾರಿ (47ವ)ರವರು ಮೃತಪಟ್ಟವರು.ಪುರುಷೋತ್ತಮ ಪೂಜಾರಿ ಅವರು ಸಂಜೆ ಮನೆಯೊಳಗಿದ್ದ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು
.ತಕ್ಷಣ ಅವರನ್ನು ಮನೆ ಮಂದಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ ಗೀತಾ, ಪುತ್ರಿ ಬಬಿತಾ ಅವರನ್ನು ಅಗಲಿದ್ದಾರೆ. ಮೂಲತಃ ಸುಳ್ಯದವರಾಗಿರುವ ಪುರುಷೋತ್ತಮ ಪೂಜಾರಿ ಅವರು ದರ್ಬೆತಡ್ಕದಿಂದ ವಿವಾಹವಾಗಿದ್ದು ಮನೆಯ ಅಳಿಯನಾಗಿದ್ದರು. ಘಟನೆಯಿಂದ ಮನೆಗೂ ಹಾನಿಯಾಗಿದೆ.

Leave A Reply

Your email address will not be published.