ನಿತ್ಯಾನಂದನ ‘ ಕೈಲಾಸ ದೇಶ ‘ ಕ್ಕೆ ಪ್ರವಾಸ ಹೊರಟಿದ್ದೀರಾ ?! | ಆತ ಭಾರತ ಮತ್ತು ಇತರ ಕೆಲ ದೇಶದಿಂದ ಭಕ್ತರು ಬಾರದಂತೆ ಬ್ಯಾನ್ ಮಾಡಿದ್ದಾನೆ !!

ಭಾರತದಲ್ಲಿ ಉದ್ರಿಕ್ತಗೊಂಡ ಕೋವಿಡ್ -19 ಎರಡನೇ ಅಲೆಯ ಮಧ್ಯೆ, ಸ್ವ-ಘೋಷಿತ ದೇವ-ಸ್ವಾಮಿ ನಿತ್ಯಾನಂದ ಹೇಳಿಕೆ ನೀಡಿ, ಭಾರತದಿಂದ ಆತನ ‘ಪ್ರೈವೇಟ್ ದೇಶ ‘ ಕೈಲಾಸಕ್ಕೆ ಯಾರನ್ನೂ ಪ್ರವೇಶಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾನೆ. ಅಷ್ಟೇ ಅಲ್ಲದೆ ಆತ ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾದ ಪ್ರಯಾಣಿಕರನ್ನು ಸಹ ನಿಷೇಧಿಸಿ ಆದೇಶ ಹೊರಡಿಸಿದ್ದಾನೆ.

ಎಲ್ಲರಿಗೂ ಗೊತ್ತಿರುವಂತೆ, ಕೈಲಾಸ ದೇಶ ಆತನದೇ ಸ್ವಂತ ದೇಶ. ಅಲ್ಲಿ ಗ್ರಾಮಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನಿ, ಪ್ರೆಸಿಡೆಂಟ್ ಕೂಡಾ ಆತನೇ. ಮುಖ್ಯ ನ್ಯಾಯಾಧೀಶ ಸಹ ! ಒಂದು ರೀತಿಯಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ನಂತೆ ಆತ. ಅಲ್ಲಿ ಆತ ದೇವರಂತೆ ಸರ್ವ ವ್ಯಾಪಿ!!!

ಲೈಂಗಿಕ ದೌರ್ಜನ್ಯದ ಆರೋಪಿಯಾಗಿದ್ದ ನಿತ್ಯಾನಂದ  2019 ರಲ್ಲಿ ಭಾರತದಿಂದ ಪಲಾಯನಗೈದ ನಂತರ ಈಕ್ವೆಡಾರ್ ಕರಾವಳಿಯಲ್ಲಿರುವ ‘ಕೈಲಾಸ’ ಎಂಬ ತಮ್ಮ ‘ವರ್ಚುವಲ್ ದ್ವೀಪದಲ್ಲಿ’ ತಲೆಮರೆಸಿಕೊಂಡಿದ್ದಾನೆ. ಈಗ ಭಾರತ ಸೇರಿದಂತೆ ಇತರ ಕೆಲವು ದೇಶದಿಂದ ಭಕ್ತರ ಪ್ರವೇಶವನ್ನು ನಿಷೇಧಿಸಿ ಮಾಡಿದ ವೀಡಿಯೊದಲ್ಲಿ ನಿತ್ಯಾನಂದನ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅನೇಕರು ಜೋಕ್ ಮತ್ತು ಮೀಮ್‌ಗಳನ್ನು ಹರಿಬಿಡುತ್ತಿದ್ದಾರೆ.

ಈ ಮಧ್ಯೆ, ತನ್ನ ಪ್ರೈವೇಟ್ ಪ್ರಾಪರ್ಟಿ ‘ಕೈಲಾಸ’ ದ್ವೀಪವನ್ನು ಪ್ರತ್ಯೇಕ ದೇಶವೆಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದು,
ಕೈಲಾಸದಲ್ಲಿ ರಿಸರ್ವ್ ಬ್ಯಾಂಕ್ ತೆರೆದು, ಅಲ್ಲಿ ಕೈಲಾಸ- ಕರೆನ್ಸಿ ಯನ್ನು ಜಾರಿಗೆ ತಂದಿದ್ದೇನೆ ಎಂದಿದ್ದಾನೆ.

ಕೈಲಾಸ ದೇಶಕ್ಕೆ ಪ್ರವಾಸ ಹೊರಟ ನಿತ್ಯ – ಆನಂದ ಆಕಾಂಕ್ಷಿಗಳು ಸ್ವಲ್ಪ ದಿನ ಕಾಯುವುದು ಅನಿವಾರ್ಯ !

Leave A Reply

Your email address will not be published.