Home Karnataka State Politics Updates ಮಾಜಿ ಸಿಎಂ ಉಮಾಭಾರತಿಯಿಂದ ಮದ್ಯದಂಗಡಿಗೆ ಕಲ್ಲೆಸೆತ : ‘ಜೈಶ್ರೀರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು!

ಮಾಜಿ ಸಿಎಂ ಉಮಾಭಾರತಿಯಿಂದ ಮದ್ಯದಂಗಡಿಗೆ ಕಲ್ಲೆಸೆತ : ‘ಜೈಶ್ರೀರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು!

Hindu neighbor gifts plot of land

Hindu neighbour gifts land to Muslim journalist

ಮಾಜಿ ಸಿಎಂ ಉಮಾಭಾರತಿ ಅವರು ಮಧ್ಯಪ್ರದೇಶದ ಮದ್ಯದಂಗಡಿಗೆ ತಮ್ಮ‌ ಬೆಂಬಲಿಗರೊಂದಿಗೆ ನುಗ್ಗಿ ಕಲ್ಲೆಸೆದ ಆತಂಕಕಾರಿ ಘಟನೆಯೊಂದು ಭೋಪಾಲ್ ನಲ್ಲಿ ನಡೆದಿದೆ.

ಉಮಾಭಾರತಿ ಕಲ್ಲೆಸೆದಾಗ ಬೆಂಬಲಿಗರು ‘ ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮದ್ಯದಂಗಡಿಗೆ ಕಲ್ಲೆಸೆಯುವ ವೀಡಿಯೋವನ್ನು ಸ್ವತಃ ಉಮಾಭಾರತಿಯೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಭೋಪಾಲ್ ನ BHEL ಪ್ರದೇಶದ ಆಜಾದ್ ನಗರದಲ್ಲಿ ಉಮಾಭಾರತಿ ಮದ್ಯದಂಗಡಿಗೆ ಕಲ್ಲೆಸೆದಿದ್ದಾರೆ. ಈ ಪ್ರದೇಶದಲ್ಲಿರುವ ಜನರು ಹಣವನ್ನು ಇಲ್ಲಿಗೆ ಬಂದು ಹಾಕುತ್ತಿದ್ದಾರೆ. ಇಲ್ಲೇ ಹತ್ತಿರದಲ್ಲಿ ದೇವಾಲಯಗಳಿವೆ. ಸಣ್ಣ ಮಕ್ಕಳ ಶಾಲೆಗಳಿವೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ.