Home » ಕಾರ್ಕಳ | ತಣ್ಣೀರು ಎಂದು ಆ್ಯಸಿಡ್ ಕುಡಿದು ಯುವತಿ ಅಸ್ವಸ್ಥ, ಫ್ಯಾಕ್ಟರಿ ಮಾಲಕನ ಮೇಲೆ ಪ್ರಕರಣ ದಾಖಲು

ಕಾರ್ಕಳ | ತಣ್ಣೀರು ಎಂದು ಆ್ಯಸಿಡ್ ಕುಡಿದು ಯುವತಿ ಅಸ್ವಸ್ಥ, ಫ್ಯಾಕ್ಟರಿ ಮಾಲಕನ ಮೇಲೆ ಪ್ರಕರಣ ದಾಖಲು

by ನಿಶ್ಮಿತಾ ಎನ್.
0 comments

Hindu neighbor gifts plot of land

Hindu neighbour gifts land to Muslim journalist

ಬಾಯಾರಿಕೆ ನೀಗಿಸಲು ತಣ್ಣೀರೆಂದು ಭಾವಿಸಿ ಆ್ಯಸಿಡ್ ಕುಡಿದು ಯುವತಿಯೊಬ್ಬಳು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.

ಮುಡಾರು ಗ್ರಾಮದ ಬಜರ್ಕಳ ದರ್ಕಾಸು ಮನೆಯ ತೇಜಸ್ವಿನಿ(20) ಅಸ್ವಸ್ಥಗೊಂಡಾಕೆ . ಮುಡಾರು ಗ್ರಾಮದ ಮುದ್ರಾಲು ಎಂಬಲ್ಲಿನ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ.

ಕಳೆದ 1 ವರ್ಷದಿಂದ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದ ತೇಜಸ್ವಿನಿ, ನಿನ್ನೆ ಬಾಯಾರಿಕೆಯಾಯಿತೆಂದು ತಣ್ಣೀರು ಎಂದು ಬಾಟಲಿಯಲ್ಲಿದ್ದ ಆ್ಯಸಿಡ್ ಕುಡಿದು ತೀವ್ರ ಅಸ್ವಸ್ಥಗೊಳಗಾಗಿದ್ದಳು.

ಮೊದಲು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚ ತಾನು ಭರಿಸುವುದಾಗಿ ಫ್ಯಾಕ್ಟರಿಯ ಮಾಲೀಕರ ನೀಡಿದ ಭರವಸೆಯನ್ನು ನಂಬಿದ ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿ ಕಾನೂನು ಕ್ರಮದ ಅಗತ್ಯ ಇಲ್ಲ ಎಂದು ತಿಳಿಸಿದ್ದಳು.

banner

ಅಸ್ವಸ್ಥಗೊಂಡ ಯುವತಿಯನ್ನು ವಿಚಾರಿಸಲು ಮುಂದಾಗದೇ, ಆಸ್ಪತ್ರೆಗೆ ಕೂಡಾ ಬಾರದೇ, ಆಸ್ಪತ್ರೆ ವೆಚ್ಚ ನೀಡದೇ ನಂಬಿಕೆ ದ್ರೋಹ ಹಾಗೂ ಘಟನೆಯ ಕಾರಣರಾಗಿರುವ ಫ್ಯಾಕ್ಟರಿ ಮಾಲಕ ಗಣೇಶ್ ಕಾಮತ್ ವಿರುದ್ಧ ಇದೀಗ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment