ಉಪ್ಪಿನಂಗಡಿಯಲ್ಲಿ ನಡೆದ ಕಂಬಳೋತ್ಸದ ಸಂದರ್ಭದಲ್ಲಿ ಕಂಬಳದ ಕೋಣಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ವೇಳೆ, ಅಲ್ಲಿ ಇದ್ದ ಬಾಲಕನೊಬ್ಬ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿದ್ದಾನೆ.

ಈ ಸಂದರ್ಭದಲ್ಲಿ ಧೈರ್ಯ ಮಾಡಿ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿತ್ ಎನ್ನುವ ಬಾಲಕ ಮೇಲಕ್ಕೆತ್ತಿ ಅಪಾಯದಿಂದ ರಕ್ಷಿಸಿದ್ದಾನೆ. ರಕ್ಷಿತ್ನ ಸಾಹಸ ಮತ್ತು ತಕ್ಷಣದ ಸ್ಪಂದನೆ ಸ್ಥಳದಲ್ಲಿದ್ದವರು ಮೆಚ್ಚುಗೆಗೆ ಪಾತ್ರವಾಯಿತು.
ಈ ಸಾಹಸಮಯ ಕಾರ್ಯವನ್ನು ಗುರುತಿಸಿದ ಶಾಸಕ ಅಶೋಕ್ ರೈ ಅವರು, ರಕ್ಷಿತ್ಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
