Home News ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದ ಗರ್ಭಿಣಿ ಮಹಿಳೆ | ಕೂಡಲೆ ಮಹಿಳೆಯನ್ನು ರಕ್ಷಿಸಿದ...

ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದ ಗರ್ಭಿಣಿ ಮಹಿಳೆ | ಕೂಡಲೆ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ

Hindu neighbor gifts plot of land

Hindu neighbour gifts land to Muslim journalist

ದೇವರು ಎಲ್ಲೆಡೆ ಇರುತ್ತಾರೆ. ಆತನ ದಯೆ ಒಂದಿದ್ದರೆ ಸಾಕು, ಎಂತಹ ಪರಿಸ್ಥಿತಿಯಲ್ಲೂ ಏನೂ ಆಗುವುದಿಲ್ಲ. ಯಾವುದೇ ರೀತಿಯ ಕೆಡುಕೂ ಸಂಭವಿಸುವುದಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ನಿಜ ಮಾಡಿದೆ ಈ ಘಟನೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇದಕ್ಕೆ ಕೈಗನ್ನಡಿ ಹಿಡಿದಂತಿದೆ.

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಕಾನ್‌ಸ್ಟೇಬಲ್ ಮುಂಬೈ ಸಮೀಪದ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿಕೊಳ್ಳದಂತೆ ಗರ್ಭಿಣಿ ಮಹಿಳೆಯನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿ ಮಹಿಳೆಯೊಬ್ಬರು ರೈಲಿನಿಂದ ಕೆಳಗಿಳಿಯುವಾಗ ಈ ಘಟನೆ ನಡೆದಿದ್ದು, ತಕ್ಷಣ ದೇವರಂತೆ ಬಂದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಕಾನ್‌ಸ್ಟೇಬಲ್ ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ, ಗರ್ಭಿಣಿ ಮಹಿಳೆಯೊಬ್ಬರು ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ನಲ್ಲಿ ನಿಂತಿದ್ದ ರೈಲನ್ನು ಹತ್ತಿದ್ದರು. ಆದರೆ, ತಾವು ಹೋಗಬೇಕಿದ್ದ ರೈಲೇ ಬೇರೆ, ತಾವು ಹತ್ತಿರುವ ರೈಲೇ ಬೇರೆ ಎಂದು ತಿಳಿದೊಡನೆ ಆಕೆ ರೈಲು ಇಳಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತು. ಈ ಸಮಯದಲ್ಲಿ ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದ ಗರ್ಭಿಣಿ ಮಹಿಳೆ ಕಾಲು ಜಾರಿದರು. ಆ ಸಮಯದಲ್ಲಿ ಸಮೀಪದಲ್ಲಿದ್ದ ರೈಲ್ವೇ ಭದ್ರತಾ ಪಡೆ ಕಾನ್‌ಸ್ಟೇಬಲ್ ಎಸ್‌.ಆರ್. ಕಂದೇಕರ್ ​​ವೇಗವಾಗಿ ಕಾರ್ಯನಿರ್ವಹಿಸಿ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದರು.

22-ಸೆಕೆಂಡ್ ವೀಡಿಯೋದಲ್ಲಿ, ಪ್ರಯಾಣಿಕರು ರೈಲಿನ ಬಳಿ ನಿಂತಿರುವುದನ್ನು ಕಾಣಬಹುದು. ಅದು ಚಲಿಸಲು ಪ್ರಾರಂಭಿಸುತ್ತದೆ ಮತ್ತು ಇದ್ದಕ್ಕಿದ್ದಂತೆ, ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಾಳೆ. ಆದಾಗ್ಯೂ, ಅವಳು ತನ್ನನ್ನು ತಾನೇ ಸಮತೋಲನಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಗ್ಗರಿಸುತ್ತಾಳೆ. ಇದನ್ನು ನೋಡಿದ ಆರ್‌ಪಿಎಫ್ ಕಾನ್‌ಸ್ಟೇಬಲ್ ತಕ್ಷಣ ಆಕೆಯ ನೆರವಿಗೆ ಧಾವಿಸಿ, ಇತರ ಇಬ್ಬರು ಪುರುಷರ ಸಹಾಯದಿಂದ ಆಕೆಯನ್ನು ರಕ್ಷಿಸುತ್ತಾನೆ. ಇತರರು ಕೂಡ ಆಕೆಗೆ ಸಹಾಯ ಮಾಡಲು ಧಾವಿಸುವುದನ್ನು ಕಾಣಬಹುದು.

ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಎಂ ಸುತಾರ್, ಘಟನೆಯ ಸಿಸಿಟಿವಿ ದೃಶ್ಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಆರ್‌ಪಿಎಫ್ ಸಿಬ್ಬಂದಿ ಶ್ರೀ ಎಸ್‌ಆರ್ ಖಂಡೇಕರ್ ಅವರು ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಪ್ರಯತ್ನಿಸುವಾಗ ಜಾರಿಬಿದ್ದ ಗರ್ಭಿಣಿ ಮಹಿಳೆಯ ಜೀವವನ್ನು ಉಳಿಸಿದ್ದಾರೆ” ಎಂದು ಸುತಾರ್ ಪೋಸ್ಟ್ ಮಾಡಿದ್ದಾರೆ.

ಇದರೊಂದಿಗೆ “ಚಾಲನೆಯಲ್ಲಿರುವ ರೈಲನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೆ ಪ್ರಯಾಣಿಕರಿಗೆ ಮನವಿ ಮಾಡುತ್ತದೆ” ಎಂದವರು ಬರೆದಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ ಸಿಬ್ಬಂದಿಗೆ ನೆರೆದಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ನೆರೆದಿದ್ದವರು ಇಂತಹ ಸಮಯದಲ್ಲಿ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗಿ ಎಂದು ಮಹಿಳೆಗೆ ಕಿವಿಮಾತು ಹೇಳಿದ್ದಾರೆ.