Home News Mocha cyclone: ಮೋಚಾ ಚಂಡಮಾರುತದ ಕುರಿತು ಒಂದಷ್ಟು ವಿವರ! ಕರಾವಳಿಗೆ ಯಾವಾಗ ಅಪ್ಪಳಿಸಲಿದೆ?

Mocha cyclone: ಮೋಚಾ ಚಂಡಮಾರುತದ ಕುರಿತು ಒಂದಷ್ಟು ವಿವರ! ಕರಾವಳಿಗೆ ಯಾವಾಗ ಅಪ್ಪಳಿಸಲಿದೆ?

Mocha cyclone
Image source: The Weather News

Hindu neighbor gifts plot of land

Hindu neighbour gifts land to Muslim journalist

Mocha cyclone: ಬಂಗಾಳಕೊಲ್ಲಿಯಲ್ಲಿ ಆಳವಾದ ಒತ್ತಡದ ಪ್ರದೇಶ ನಿರ್ಮಾಣವಾಗುತ್ತಿದ್ದು, ಚಂಡಮಾರುತದ ಸ್ವರೂಪ ಪಡೆದುಕೊಳ್ಳಲಿದೆ. ಈ ಚಂಡಮಾರುತಕ್ಕೆ ‘ಸೈಕ್ಲೋನ್ ಮೋಚಾ’ ಅಥವಾ ಮೋಚಾ ಸೈಕ್ಲೋನ್ ಎಂದು ಹೆಸರಿಡಲಾಗಿದೆ. ಆಗ್ನೇಯ ಮತ್ತು ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಈ ಒತ್ತಡದ ಪ್ರದೇಶವು ರೂಪುಗೊಳ್ಳುತ್ತಿದೆ. ಮೋಚಾ ಚಂಡಮಾರುತದಿಂದಾಗಿ (Mocha cyclone) ಈಶಾನ್ಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿರುವಾಗ ಈ ಚಂಡಮಾರುತಕ್ಕೆ ಮೋಚಾ ಎಂಬ ಹೆಸರು ಹೇಗೆ ಬಂತು ಮತ್ತು ಯಾವಾಗ ಅಪ್ಪಳಿಸುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೈಕ್ಲೋನ್ ಮೋಚಕ್ಕೆ ಈ ಹೆಸರು ಬರಲು ಕಾರಣವೇನು?
ಯೆಮೆನ್ ಈ ಚಂಡಮಾರುತಕ್ಕೆ ಮೋಚಾ (ಮೋಖಾ) ಎಂಬ ಹೆಸರನ್ನು ನೀಡಿದೆ. ಚಂಡಮಾರುತಕ್ಕೆ ಕೆಂಪು ಸಮುದ್ರದ ಬಂದರು ನಗರವಾದ ಮೋಖಾದಿಂದ ಈ ಹೆಸರನ್ನು ಇಡಲಾಗಿದೆ. ಈ ನಗರವು 500 ವರ್ಷಗಳ ಹಿಂದೆ ಜಗತ್ತಿಗೆ ಕಾಫಿಯನ್ನು ಪರಿಚಯ ಮಾಡಿತು ಎಂದು ಮೋಖಾ ನಗರದ ಬಗ್ಗೆ ಮಾಹಿತಿ ಇದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸ್ಥಳೀಯ ನಿಯಮಗಳ ಆಧಾರದ ಮೇಲೆ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ.

ಚಂಡಮಾರುತಗಳನ್ನು ಹೆಸರಿಸುವ ವ್ಯವಸ್ಥೆಗಳನ್ನು ವಿಶ್ವ ಮಾಪನಶಾಸ್ತ್ರ ಸಂಸ್ಥೆ (WMO) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡಿವೆ. WMO ಪ್ರಕಾರ, ಅಟ್ಲಾಂಟಿಕ್ ಮತ್ತು ದಕ್ಷಿಣ ಗೋಳಾರ್ಧದಲ್ಲಿ (ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್) ಉಷ್ಣವಲಯದ ಚಂಡಮಾರುತಗಳನ್ನು ವರ್ಣಮಾಲೆಯ ಕ್ರಮದಲ್ಲಿ ಮತ್ತು ಹೆಣ್ಣು ಮತ್ತು ಪುರುಷರ ಹೆಸರಿನಿಂದ ಹೆಸರಿಸಲಾಗಿದೆ. ಆದರೆ, ಉತ್ತರ ಹಿಂದೂ ಮಹಾಸಾಗರದಲ್ಲಿನ ಚಂಡಮಾರುತಗಳ ಹೆಸರುಗಳನ್ನು ದೇಶಗಳ ಪ್ರಕಾರ ವರ್ಣಮಾಲೆಯ ಕ್ರಮದಲ್ಲಿ ಪಟ್ಟಿ ಮಾಡಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೇ 9 ರಂದು ಮೋಕಾ ಚಂಡಮಾರುತವು ತೀವ್ರಗೊಳ್ಳುವ ಸಾಧ್ಯತೆಯಿದೆ. ಮೇ 10ರಂದು ಇದು ಚಂಡಮಾರುತದ ರೂಪ ಪಡೆಯಲಿದೆ. ಈ ಚಂಡಮಾರುತವು ಮೇ 12 ರ ಸುಮಾರಿಗೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ತಿರುಗುತ್ತದೆ. ಚಂಡಮಾರುತವು ಕರಾವಳಿಯತ್ತ ಚಲಿಸಿದಾಗ ಮತ್ತು ಕಡಿಮೆ ಒತ್ತಡದ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಲು ಪ್ರಾರಂಭಿಸಿದಾಗ ಮಾತ್ರ ಅದು ಘರ್ಷಣೆಯ ಸಮಯ ಮತ್ತು ಅಪಾಯಕಾರಿಯಾಗುವ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಎಂ.ಮಹಾಪಾತ್ರ ಹೇಳಿದ್ದಾರೆ.

ಈ ಕುರಿತು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಮಂಗಳವಾರ ಸಣ್ಣ ಹಡಗುಗಳು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯ ಕೂಡದು ಎಂದು ಹೇಳಿದೆ. ಮೇ 8 ರಿಂದ 12 ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಪ್ರವಾಸೋದ್ಯಮ, ಕಡಲತೀರದ ಚಟುವಟಿಕೆಗಳು ಮತ್ತು ಹಡಗು ಸಾಗಣೆಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಹೇಳಿದೆ.

ಇದನ್ನೂ ಓದಿ:Kiccha Sudeep – Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಬರೆದ ಕಿಚ್ಚ ಸುದೀಪ್! ಬೆರಗಾದ ಫ್ಯಾನ್ಸ್!