Home News Chennai: ಪತ್ನಿಯಿಂದ ಬೇಸತ್ತ ಪತಿ, 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ದೇವಸ್ಥಾನಕ್ಕೆ...

Chennai: ಪತ್ನಿಯಿಂದ ಬೇಸತ್ತ ಪತಿ, 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ದೇವಸ್ಥಾನಕ್ಕೆ ಹಾಕಿದ ಮಾಜಿ ಯೋಧ

Image Credit: The Hindu

Hindu neighbor gifts plot of land

Hindu neighbour gifts land to Muslim journalist

Chennai: ಗಂಡ ಹೆಂಡತಿಯ ನಡುವೆ ವಿರಸ ಉಂಟಾಗಿ, ನೊಂದ ಮಾಜಿ ಯೋಧನೊಬ್ಬ ತನಗೆ ಸೇರಿದ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಿತ್ರ ಘಟನೆ ನಡೆದಿದೆ.

ನಿವೃತ್ತ ಸೇನಾಧಿಕಾರಿ ಎಸ್‌.ವಿಜಯನ್‌ ತನಗೆ ಸೇರಿ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ. ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ.

ದೇವಸ್ಥಾನದ ಆಡಳಿತ ಮಂಡಳಿ ಜೂನ್‌ 24 ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಾಡುವ ಸಮಯದಲ್ಲಿ ಈ ಆಸ್ತಿಪತ್ರ ದೊರಕಿದೆ. ಇದನ್ನು ನೋಡಿದ ಅಧಿಕಾರಿಗಳು ಶಾಕ್‌ಗೊಳಗಾಗಿದ್ದಾರೆ. ಈ ವಿಷಯಕ್ಕೆ ಕುರಿತಂತೆ ಆಡಳಿತ ಮಂಡಳಿ ವಿಜಯನ್‌ ಅವರನ್ನು ಸಂಪರ್ಕ ಮಾಡಿ ವಿಚಾರಿಸಿದ ಸಂದರ್ಭ ನಾನು ನನ್ನ ಸ್ವಇಚ್ಛೆಯಿಂದ ಮನೆಯ ಕಾಗದ ಪತ್ರಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದೇನೆ ಎಂದು ಲಿಖಿತ ರೂಪದಲ್ಲಿ ದೇವಸ್ಥಾನದ ಆಡಳಿತ ಮಂಡಳಿಗೆ ಹೇಳಿದ್ದಾರೆ.

ವಿಜಯನ್‌ ಅವರ ಪತ್ನಿ ಕಸ್ತೂರಿ ಸರಕಾರಿ ಶಾಲಾ ಶಿಕ್ಷಕಿಯಾಗಿದ್ದು, ಇವರಿಬ್ಬರಿಗೆ ಇಬ್ಬರು ಹೆಣ್ಣುಮಕ್ಕಳು. ಸುಬ್ಬುಲಕ್ಷ್ಮಿ, ರಾಜಲಕ್ಷ್ಮೀ ಎಂದು. ಇವರು ಮದುವೆಯಾಗಿ ವಿದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇದರ ನಡುವೆ ವಿಜಯನ್‌ ಮತ್ತು ಪತ್ನಿ ಕಸ್ತೂರಿ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಕೆಲ ವರ್ಷಗಳಿಂದ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಹೀಗಾಗಿ ನೊಂದ ವಿಜಯನ್‌ ಕೆಲವು ದಿನಗಳ ಹಿಂದೆ ಪಟವೇಡು ಗ್ರಾಮದಲ್ಲಿರುವ ಶ್ರೀ ರೇಣುಕಾಂಬಳ ದೇವಸ್ಥಾನಕ್ಕೆ ತೆರಳಿ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

ಇನ್ನು ಮನೆಯ ಕಾಗದ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿದ ವಿಷಯ ಗೊತ್ತಾಗಿ ಪತ್ನಿ, ಮಕ್ಕಳು ಓಡೋಡಿ ಬಂದಿದ್ದು, ನಮ್ಮ ಮನೆಯ ಕಾಗದ ಪತ್ರ ನಮಗೆ ಕೊಡಿ ಎಂದು ದೇವಸ್ಥಾನದ ಮಂಡಳಿಗೆ ಕೇಳಿಕೊಂಡಿದ್ದಾರೆ. ನಮಗೆ ವಿಷಯ ತಿಳಿಸದೇ ಈ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆಸ್ತಿಗಳನ್ನು ದಾನ ಮಾಡುವ ಇಚ್ಛೆಯನ್ನು ಘೋಷಣೆಯಲ್ಲಿ ವ್ಯಕ್ತಪಡಿಸಲಾಗಿದ್ದರೂ, ಹಿರಿಯ ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆ ಅಧಿಕಾರಿಯ ಕಾನೂನುಬದ್ಧ ಮಾಲೀಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹುಂಡಿಯಲ್ಲಿ ಹಾಕಿದ ಎರಡು ಆಸ್ತಿ ದಾಖಲೆಗಳು ದೇವಾಲಯದ ಬಳಿಯ 10 ಸೆಂಟ್ಸ್ ಭೂಮಿ ಮತ್ತು ಒಂದು ಅಂತಸ್ತಿನ ಮನೆಯದ್ದಾಗಿವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹಿರಿಯ HR&CE ಅಧಿಕಾರಿಗಳಿಗೆ ತಿಳಿಸಲಾಗಿರುವುದರಿಂದ ದಾಖಲೆಗಳನ್ನು ವಿಜಯನ್‌ಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಯವರೆಗೆ, ಇಲಾಖೆಯು ಆಸ್ತಿ ದಾಖಲೆಗಳ ಕಸ್ಟಡಿಯನ್ ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.