HomeNewsHeart Attack: ತಾಲೂಕು ಪಂಚಾಯಿತಿ ಪ್ರಭಾರ ಯೋಜನೆ ಅಧಿಕಾರಿಗೆ ಹೃದಯಾಘಾತ - ಕಾರಿನಲ್ಲೇ ಕೊನೆ ಉಸಿರು

Heart Attack: ತಾಲೂಕು ಪಂಚಾಯಿತಿ ಪ್ರಭಾರ ಯೋಜನೆ ಅಧಿಕಾರಿಗೆ ಹೃದಯಾಘಾತ – ಕಾರಿನಲ್ಲೇ ಕೊನೆ ಉಸಿರು

Hindu neighbor gifts plot of land

Hindu neighbour gifts land to Muslim journalist

Heart Attack: ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಪ್ರಭಾರ ಯೋಜನಾಧಿಕಾರಿ ಮನಮೋಹನ್ (46) ತನ್ನ ಆಲ್ಟೋ ಕಾರಿನಲ್ಲಿ ಚಲಿಸುತ್ತಿದ್ದಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಇಂದು ಸಂಜೆ 4ರ ಸಮಯಕ್ಕೆ ಮಡಿಕೇರಿಯ ಪೊನ್ನಂಪೇಟೆಯ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಈ ಘಟನೆ ಸಂಭವಿಸಿದೆ.

ಮೂಲತಃ ಬೆಂಗಳೂರಿನವಾರದ ಇವರು ತಿತಿಮಿತಿಯಲ್ಲಿ ಕುಟುಂಬ ಸಹಿತ ವಾಸವಾಗಿದ್ದರು. ಪೊನ್ನಪ್ಪ ಸಂತೆ, ನಿಟ್ಟೂರು ಬಾಳಲೆ, ಸೋಮವಾರ ಪೇಟೆ ಸಿದ್ದಾಪುರದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದುವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಶ್ರೀಯುತರು ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ:TRAI: CNAP ಎಂದರೇನು? ನಕಲಿ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವ CNAP ಸೇವೆ ಯಾವುದು?

ಇಂದು ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ದಿಡಿರಾಗಿ ಕಾರಿನಲ್ಲಿ ಕುಸಿದು ಸಾವನಪ್ಪಿದ್ದಾರೆ. ಮೃತರ ನಿಧನಕ್ಕೆ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

Most Popular

Recent Comments