Home News Indian Railways: ಕರ್ನಾಟಕದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿ

Indian Railways: ಕರ್ನಾಟಕದ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದ ರೈಲು ಪ್ರಯಾಣಿಕರಿಗೆ ಗಮನಿಸಬೇಕಾದ ಮಾಹಿತಿ. ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಆದರೆ ಭಾರತೀಯ ರೈಲ್ವೇಯು ಬೆಂಗಳೂರು ವಿಭಾಗದ ದೊಡ್ಡಜಾಲ, ಆವತಿಹಳ್ಳಿ ರೈಲು ನಿಲ್ದಾಣಗಳನ್ನೂ ಸೇರಿ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ .

ಡಿಸೆಂಬರ್ 1, ಅಂದರೆ ಇಂದಿನಿಂದಲೇ ಬೆಂಗಳೂರು ವಿಭಾಗದ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿವೆ ಎಂದು ಮಾಧ್ಯಮ ಒಂದು ವರದಿ ಮಾಡಿದೆ . ಸದ್ಯ ಕೋಲಾರ ಸಮೀಪದ ಹುಡುಕುಲ ಮತ್ತು ಜನ್ನಗಟ್ಟಾ, ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ ಮತ್ತು ಆಂಧ್ರಪ್ರದೇಶದ ಕೊಟ್ಟಚೆರುವು ರೈಲು ನಿಲುಗಡೆ ನಿಲ್ದಾಣಗಳು ಮುಚ್ಚಲಿವೆ.

ಸದ್ಯ ನೈಋತ್ಯ ರೈಲ್ವೇಯ ನಿಲುಗಡೆ ನಿಲ್ದಾಣಗಳು ಇರುವ ಊರುಗಳ ಖಾಯಂ ನಿವಾಸಿಗಳಿಂದ ಏಜೆಂಟ್​ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಪ್ರಸ್ತುತ ಈ ರೈಲು ನಿಲ್ದಾಣಗಳಲ್ಲಿ ಏಜೆಂಟ್​ಗಳಿಗೆ ಆದಾಯ ಕಡಿಮೆ ಆಗಿದ್ದು, ನಿರುತ್ಸಾಹ ತೋರಿದ ಕಾರಣ ಮುಚ್ಚು ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. ಏಜೆಂಟ್​ಗಳು ರೈಲು ನಿಲುಗಡೆ ನಿಲ್ದಾಣಗಳಲ್ಲಿ ಮಾರಾಟವಾಗುವ ಟಿಕೆಟ್​ಗಳಿಂದ ಕಮಿಷನ್ ಪಡೆಯುತ್ತಾರೆ. ಟಿಕೆಟ್​ಗಳ ಮಾರಾಟ ಕಡಿಮೆಯಾದ ಕಾರಣ ಅವರ ಆದಾಯವು ಕುಸಿದಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರು ವಿಭಾಗದ ಒಟ್ಟು 6 ರೈಲು ನಿಲುಗಡೆ ನಿಲ್ದಾಣಗಳನ್ನು ಮುಚ್ಚಲಿವೆ ಎಂಬ ಮಾಹಿತಿಯನ್ನು ಮಾಧ್ಯಮವೊಂದು ಪ್ರಕಟಿಸಿದೆ .