Home News Ranu Mandal: ಸೋಶಿಯಲ್ ಮೀಡಿಯಾ ಸ್ಟಾರ್ ‘ರಾನು ಮಂಡಲ್’ ಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ...

Ranu Mandal: ಸೋಶಿಯಲ್ ಮೀಡಿಯಾ ಸ್ಟಾರ್ ‘ರಾನು ಮಂಡಲ್’ ಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ

CREATOR: gd-jpeg v1.0 (using IJG JPEG v62), quality = 75?

Hindu neighbor gifts plot of land

Hindu neighbour gifts land to Muslim journalist

Ranu Mandal : ಇಂದು ಸೋಶಿಯಲ್ ಮೀಡಿಯಾಗಳ ಪ್ರಭಾವದಿಂದಾಗಿ ಯಾವ ವ್ಯಕ್ತಿ, ಯಾವ ಸಮಯಕ್ಕೆ ಫೇಮಸ್ ಆಗುತ್ತಾರೆ, ಸ್ಟಾರ್ ಆಗುತ್ತಾರೆ, ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುತ್ತಾರೆ ಎಂಬುದು ತಿಳಿಯದಾಗಿದೆ. ಇದೀಗ ಇಂಥದ್ದೇ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ತನ್ನ ಹಾಡಿನ ಮುಖಾಂತರ ಒಂದು ಕಾಲದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚಿದ್ದ ರಾನು ಮಂಡಲ್ ಅವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ.

ಹೌದು, 2019ರಲ್ಲಿ ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಾ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ರಾನು ಮಂಡಲ್ (Ranu Mondal) ಬಗ್ಗೆ ದೇಶದ ಹೆಚ್ಚಿನ ಜನರಿಗೆ ಗೊತ್ತಿರಬಹುದು. ಇಂದು ಯಾವುದೇ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮರೆಯಾದರೂ ಕೂಡ ರಾನು ಮಂಡಲ್ ಹೆಸರನ್ನು ಯಾರು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ದೊಡ್ಡ ದೊಡ್ಡ ಸ್ಟಾರ್ ಗಳೇ ರಾನು ಮಂಡಲ್ ಅವರನ್ನು ರಾತ್ರಿ ಬೆಳಗಾಗುವುದರೊಳಗೆಡೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿಸಿದ್ದರು. 

ಅದು 2019ರ ಸಮಯ ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣವೊಂದರಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ’ ಎನ್ನುವ ಹಾಡನ್ನು ಹಾಡುತ್ತಿದ್ದರು. ಇದನ್ನು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ರಾತ್ರೋರಾತ್ರಿ ಭಾರೀ ವೈರಲ್‌ ಆಗಿತ್ತು. ಇದು ಬಾಲಿವುಡ್‌ ಗಾಯಕ ಹಿಮೇಶ್ ರೇಶಮಿಯಾ ಅವರಿಗೆ ತಲುಪಿ, ಹಿಮೇಶ್‌ ಸಿನಿಮಾವೊಂದರಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದರು. ಅಲ್ಲಿಂದ ರಾನು ಮಂಡಲ್‌ ಅವರ ಹೆಸರು ಇಂಟರ್‌ನೆಟ್‌ನಲ್ಲಿ ಹರಿದಾಡಲು ಶುರುವಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದಾಕೆ, ರಂಗೀನ್‌ ಲೋಕದ ಸೆಲೆಬ್ರಿಟಿ ಆಗಿ ಬದಲಾಗಿದ್ದರು. ಹಿಮೇಶ್ ʼಹ್ಯಾಪಿ ಹಾರ್ಡಿʼ & ಹರೇ’ ಚಿತ್ರಕ್ಕಾಗಿ ‘ತೇರಿ ಮೇರಿ ಕಹಾನಿ’ ಹಾಡು ಹಾಡಿದ್ದರು. ಇದರ ಜತೆ ಅವರು ಮೂರು ಹಾಡುಗಳನ್ನು ಹಾಡಿದ್ದರು. ಅಲ್ಲಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಅಲ್ಲಿಂದ ರಾನು ಮಂಡಲ್ ಜೀವನವೇ ಬದಲಾಗಿ ಬಿಟ್ಟಿತ್ತು. ಆದರೆ ಇದೀಗ ಇದೇ ರಾಮು ಮಂಡಲ್ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ.

ಯಸ್, ಈಗ ರಾನು ತೀವ್ರ ಬಡತನ ಮತ್ತು ಮಾನಸಿಕ ಅಸ್ಥಿರತೆಯಿಂದಾಗಿ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಇತ್ತೀಚೆಗೆ ಯೂಟ್ಯೂಬರ್ ನಿಶಾ ತಿವಾರಿ ಅವರು ರಾಣಾಘಾಟ್‌ನಲ್ಲಿರುವ ರಾನು ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದು, ಶಿಥಿಲಗೊಂಡಿರುವ ಮನೆ, ಸ್ವಚ್ಛತೆಯಿಲ್ಲದ ಕೋಣೆಗಳು ಹಾಗೂ ತೀರ ಬಡತನದ ಬದುಕಿನ ದರ್ಶನವನ್ನು ಮಾಡಿಸಿದ್ದಾರೆ. ಇದಲ್ಲದೆ ರಾನು ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಅವರಿಗೆ ಮರೆವಿನ ಕಾಯಿಲೆಯಿದೆ. ಈಗ ಮಾತನಾಡಿದ್ದು, ಮತ್ತೆ ನೆನಪು ಇರುವುದಿಲ್ಲ. ಕೆಲವೊಮ್ಮೆ ಬಹಳಷ್ಟು ಹಣ ಸಂಪಾದಿಸಿದ್ದೇನೆ ಎಂದು ಹೇಳುತ್ತಾರೆ, ಕೆಲವೊಮ್ಮೆ ಅವರು ಮೋಸ ಹೋದೆ ಎಂದು ಹೇಳುತ್ತಾರೆ. ಕೆಲವೊಮ್ಮೆ ಅವಳು ಇದ್ದಕ್ಕಿದ್ದಂತೆ ನಗಲು ಪ್ರಾರಂಭಿಸುತ್ತಾರೆ. ಕೋಪಗೊಳ್ಳುತ್ತಾಳೆ. ಈ ಮಾನಸಿಕ ಸ್ಥಿತಿಯಿಂದಾಗಿ, ಅವರು ಹೇಳುವ ಯಾವುದನ್ನಾದರೂ ಸಂಪೂರ್ಣವಾಗಿ ನಂಬುವುದು ಕಷ್ಟಕರವಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.