Homelatestಮೀನು ಹಿಡಿಯಲು ಹೋದ ಮಕ್ಕಳಿಗೆ ಪತ್ತೆಯಾಯಿತು "ರಾಮ್" ಎಂದು ಬರೆದಿರುವ ಕಲ್ಲು | ರಾಮಭಕ್ತರ ಹರ್ಷೋದ್ಗಾರ

ಮೀನು ಹಿಡಿಯಲು ಹೋದ ಮಕ್ಕಳಿಗೆ ಪತ್ತೆಯಾಯಿತು “ರಾಮ್” ಎಂದು ಬರೆದಿರುವ ಕಲ್ಲು | ರಾಮಭಕ್ತರ ಹರ್ಷೋದ್ಗಾರ

Hindu neighbor gifts plot of land

Hindu neighbour gifts land to Muslim journalist

ರಾಮಭಕ್ತರಿಗೆ ಒಂದು ಸಿಹಿಸುದ್ದಿ. ಹೌದು, ಉತ್ತರ ಪ್ರದೇಶದಲ್ಲಿ ‘ ರಾಮಸೇತು’ ಎಂದು ಬರೆದಿರುವ ಕಲ್ಲೊಂದು ದೊರಕಿದೆ. ಹೌದು, ಉತ್ತರ ಪ್ರದೇಶದ ಇಸಾನ್ ನದಿಯ ನೀರಿನಲ್ಲಿ ತೇಲುತ್ತಿರುವ ಈ ಕಲ್ಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕಲ್ಲು ‘ರಾಮಸೇತು’ ಕಲ್ಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಯುಪಿಯ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲಿ ಬಂದಿದೆ. ಇದರಲ್ಲಿ ಕಲ್ಲಿನ ಮೇಲೆ ಹಿಂದಿ ಭಾಷೆಯಲ್ಲಿ ‘ರಾಮ್’ ಎಂದು ಬರೆಯಲಾಗಿದೆ. ಸ್ಥಳೀಯರ ಪ್ರಕಾರ ಈ ಕಲ್ಲು ಖಡಾಖಂಡಿತವಾಗಿ ಶ್ರೀರಾಮನಿಂದ ನಿರ್ಮಿಸಿದ್ದು ಹಾಗೂ ಇದು ‘ರಾಮಸೇತುವಿನ ಕಲ್ಲು’ ಎಂದು ದೃಢವಾಗಿ ನಂಬಿಕೆಯಿಂದ ಹೇಳುತ್ತಿದ್ದಾರೆ.

ಮೀನು ಹಿಡಿಯಲೆಂದು ನದಿಗೆ ತೆರಳಿದ್ದ ಮಕ್ಕಳಿಗೆ ಈ ಕಲ್ಲು ದೊರಕಿದೆ. ಹಿಂದಿಯಲ್ಲಿ ‘ರಾಮ್’ ಎಂದು ಬರೆದಿರುವ ಈ ಕಲ್ಲು ಸಿಕ್ಕಿದೆ. ಈ ಕಲ್ಲು ಬರೋಬ್ಬರಿ 5.7 ಕೆಜಿ ತೂಕವಿದ್ದರೂ ನೀರಿನಲ್ಲಿ ತೇಲುತ್ತಿರುವುದು ನಿಜಕ್ಕೂ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ರಾಮ ಸೀತಾದೇವಿಯನ್ನು ಹುಡುಕುತ್ತಾ ಶ್ರೀಲಂಕಾವನ್ನು ತಲುಪಲು ನೀರಿನ ಮೇಲೆ ತೇಲುತ್ತಿರುವ ಕಲ್ಲುಗಳಿಂದ ರಾಮಸೇತುವನ್ನು ವಾನರಸೇನನ ಸಹಾಯದಿಂದ ನಿರ್ಮಿಸಿದನು ಎಂದು ಹಿಂದೂಗಳು ನಂಬುತ್ತಾರೆ. ಈ ಘಟನೆಗೆ ಸಾಕ್ಷಿ ಇದೀಗ ನದಿ ನೀರಿನಲ್ಲಿ ತೇಲುತ್ತಿರುವ ಕಲ್ಲು ಎನ್ನಲಾಗುತ್ತಿದೆ. ಇದು ರಾಮನ ಕಲ್ಲೇ ಎಂದು ದೃಢವಾಗಿ ನಂಬಿರುವ ಅಲ್ಲಿನ ಸ್ಥಳೀಯ ಜನ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಲ್ಲಿಗೆ ಪೂಜೆ ಮಾಡುತ್ತಿದ್ದಾರೆ.

RELATED ARTICLES

Most Popular

Recent Comments