ಸೇವಾ ಭಾರತಿ ಕನ್ಯಾಡಿ ಇದರ ವತಿಯಿಂದ ಕರ್ನಾಟಕ ಸರಕಾರದ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಮಿಕ ಆಯುಕ್ತರಾದ ಎಸ್.ಬಿ ರವಿಕುಮಾರ್ ಅವರನ್ನು ಭೇಟಿ ಮಾಡಿ ಅಸಂಘಟಿತ ಕಾರ್ಮಿಕರಲ್ಲಿ ಪ್ರಾಮುಖ್ಯವಾಗಿ ಕೃಷಿ ಕಾರ್ಮಿಕರು ಕೃಷಿ ಕೆಲಸಗಳಲ್ಲಿ ಎತ್ತರದಿಂದ ಬಿದ್ದು ಮಲಗಿದ ಪರಿಸ್ಥಿತಿಯಲ್ಲಿದ್ದವರ ಜೀವನಕ್ಕೆ ಸಹಕಾರಿಯಾಗುವ ಯೋಜನೆಗಳನ್ನು ಅಸಂಘಟಿತ ಮಂಡಳಿಯಲ್ಲಿ ಕೈಗೊಳ್ಳುವಂತೆ ಹಾಗೂ ಈಗಾಗಲೇ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಸೇವಾ ಭಾರತಿ ಕೈಗೊಂಡಿರುವ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಬೆನ್ನುಹುರಿ ಮುರಿತಕ್ಕೊಳಗಾದ ಸಮಗ್ರ ಜೀವನ ಅಧ್ಯಯನದ ವರದಿಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಉಪಕಾರ್ಮಿಕ ಆಯುಕ್ತರಾದ ಎ.ಸಿ ತಮ್ಮಣ್ಣ ಉಪಸ್ಥಿತರಿದ್ದರು. ಸೇವಾ ಭಾರತಿಯ ಖಚಾಚಿ ಎ.ಜೈ ರಾಜ್ ಸಾಲಿಯಾನ್ ಕಾನರ್ಪ ಅಧಿಕಾರಿಗಳನ್ನು ಭೇಟಿ ಮಾಡಿದರು


