Home » Ujjaini: ವಿಭೂತಿ, ರುದ್ರಾಕ್ಷಿ ಧರಿಸಿ ಹಿಂದೂ ಯುವತಿ ಜೊತೆ ಉಜ್ಜಯನಿಗೆ ಬಂದ ಮುಸ್ಲಿಂ ಯುವಕ – ಭಜರಂಗದಳದವರಿಂದ ಥಳಿತ

Ujjaini: ವಿಭೂತಿ, ರುದ್ರಾಕ್ಷಿ ಧರಿಸಿ ಹಿಂದೂ ಯುವತಿ ಜೊತೆ ಉಜ್ಜಯನಿಗೆ ಬಂದ ಮುಸ್ಲಿಂ ಯುವಕ – ಭಜರಂಗದಳದವರಿಂದ ಥಳಿತ

0 comments

Ujjaini: ಮುಸ್ಲಿಂ ಯುವಕನೊಬ್ಬ ಹಣೆಗೆ ವಿಭೂತಿ ಕೊರಳಿಗೆ ರುದ್ರಾಕ್ಷಿ ಧರಿಸಿಕೊಂಡು ತಾನೊಬ್ಬ ಹಿಂದೂ ಪ್ರದರ್ಶಿಸುತ್ತಾ, ಹಿಂದೂ ಯುವತಿಯ ಜೊತೆ ಉಜ್ಜಯನಿಗೆ ಬಂದಾಗ ಭಜರಂಗದಳದ ಕಾರ್ಯಕರ್ತರು ಅವನನ್ನು ಹಿಡಿದು ತಳಿಸಿದ ಘಟನೆ ನಡೆದಿದೆ.

ಪಂಜಾಬ್‌ನ ಮೊಹಾಲಿಯ ಮೂಲದವರಾದ ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕ ಇಬ್ಬರು ಉಜ್ಜಯಿನಿಯ ಹೊಟೇಲೊಂದರಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿದ್ದರು. ಈ ವಿಚಾರ ಭಜರಂಗದಳದವರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಭಜರಂಗದಳದವರು ಆ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರಂಭದಲ್ಲಿ ಆ ಮುಸ್ಲಿಂ ಯುವಕ ತಾನು ಹಿಂದೂ ಎಂದು ಹೇಳಿಕೊಂಡಿದ್ದಾನೆ. ಆದರೆ ಭಜರಂಗದಳದವರು ಬಾರಿಸುತ್ತಿದ್ದಂತೆ ಆತ ತಾನು ಮುಸ್ಲಿಂ ಹೆಸರು ಜಾಫರ್ ಖಾನ್ ಎಂದು ಹೇಳಿದ್ದಾನೆ.

ಜಾಫರ್‌ನ ಹಳದಿ ಬಣ್ಣದ ಬಟ್ಟೆ ಕುರ್ತಾ ಹಾಗೂ ಧೋತಿ ಧರಿಸಿದ್ದು, ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಹಾಕಿದ್ದ ಆತನ ಹಣೆಯ ಮೇಲೆ ವಿಭೂತಿ ಇತ್ತು. ಆತನನ್ನು ನೋಡಿದರೆ ಹಿಂದೂ ಅಲ್ಲ ಎಂಬ ಅನುಮಾನವೇ ಬರುವುದಿಲ್ಲ. ಆದರೂ ಭಜರಂಗದಳದವರಿಗೆ ಅದು ಹೇಗೆ ಸುಳಿವು ಸಿಕ್ತೋ ಗೊತ್ತಿಲ್ಲ, ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಗಲಾಟೆಯ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ ಆತನ ಹೆಸರು ಜಾಫರ್ ಖಾನ್ ಎಂದು ತಿಳಿದು ಬಂದಿದೆ.

ಈತ ಹಿಂದೂ ಮಹಿಳೆಯ ಜೊತೆಗೆ ಮಹಾಕಾಳೇಶ್ವರ ದೇವಸ್ಥಾನ, ಹರಸಿದ್ಧಿ ದೇವಸ್ಥಾನ ಮತ್ತು ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಗಲಾಟೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪುರುಷ ಮತ್ತು ಮಹಿಳೆ ಇಬ್ಬರೂ ಮೊಹಾಲಿಯ ನಿವಾಸಿಗಳು ಎಂದು ನಾನಖೇಡಾ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಯಾದವ್ ತಿಳಿಸಿದ್ದಾರೆ.

banner

You may also like