Home News ಕುತ್ತಿಗೆಗೆ ವೈರ್ ಬಿಗಿದು ಏನೂ ಅರಿಯದ ಮೂರು ವರ್ಷದ ಮಗುವನ್ನು ಕೊಂದ ಮಲತಾಯಿ!! ತಿಂಗಳ ಹಿಂದೆ...

ಕುತ್ತಿಗೆಗೆ ವೈರ್ ಬಿಗಿದು ಏನೂ ಅರಿಯದ ಮೂರು ವರ್ಷದ ಮಗುವನ್ನು ಕೊಂದ ಮಲತಾಯಿ!! ತಿಂಗಳ ಹಿಂದೆ ಮದುವೆಯಾಗಿ ಮನೆಗೆ ಬಂದಾಕೆ ಮಾಡಿದ್ದಳು ಹತ್ಯೆಗೆ ಪ್ಲಾನ್!!

Hindu neighbor gifts plot of land

Hindu neighbour gifts land to Muslim journalist

ಮಲತಾಯಿಯ ಕ್ರೂರತ್ವಕ್ಕೆ ಐದು ವರ್ಷದ ಮಗುವೊಂದು ಬಲಿಯಾಗಿ,ಮೂರು ವರ್ಷಗಳ ಮಗು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಮಿಂಚಿನಾಳ ಎಂಬಲ್ಲಿ ನಡೆದಿದೆ.ಮಗುವನ್ನು ಕೊಂದ ಕ್ರೂರಿ ಮಲತಾಯಿಯನ್ನು ಸವಿತಾ ವಿನೋದ್ ಎಂದು ಗುರುತಿಸಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಲತಾಯಿ

ಘಟನೆ ವಿವರ: ವಿನೋದ್ ಎಂಬವರಿಗೆ ಈ ಮೊದಲು ಶಾರುಭಾಯಿ ಎಂಬ ಮಹಿಳೆಯೊಂದಿಗೆ ವಿವಾಹವಾಗಿ ಸಮಿತ್ ಹಾಗೂ ಸಂಪತ್ ಎಂಬಿಬ್ಬರು ಗಂಡು ಮಕ್ಕಳಿದ್ದರು. ಕಳೆದ ಆರು ತಿಂಗಳ ಹಿಂದೆ ಶಾರುಭಾಯಿ ಅನಾರೋಗ್ಯದಿಂದಾಗಿ ಮೃತಪಟ್ಟ ಬಳಿಕ ವಿನೋದ್ ಸವಿತಾಳನ್ನು ವಿವಾಹವಾಗಿದ್ದರು. ವಿವಾಹವಾಗಿ ಮನೆಗೆ ಬಂದ ಸವಿತಾ ಮೊದಲ ಹೆಂಡತಿಯ ಮಕ್ಕಳನ್ನು ಕಡೆಗಣಿಸುತ್ತಿದ್ದಳು.

ಮೊದಲ ಹೆಂಡತಿಯ ಮಕ್ಕಳು ನಮಗೆ ಯಾಕೆ,ಮಕ್ಕಳು ಮುಂದೆ ಆಸ್ತಿಯಲ್ಲಿ ಪಾಲು ಕೇಳುತ್ತಾರೆ ಎಂದು ಮೊದಲ ಹೆಂಡತಿಯ ಇಬ್ಬರು ಪುತ್ರರಿಗೂ ಹಲ್ಲೆ ನಡೆಸಿದ್ದಾಳೆ. ಓರ್ವ ಪುತ್ರನಿಗೆ ಮೊಬೈಲ್ ಚಾರ್ಜರ್ ವೈರ್ ಕುತ್ತಿಗೆಗೆ ಬಿಗಿದು ಕೊಲೆ ನಡೆಸಿದ್ದು, ಇನ್ನೋರ್ವ ಪುತ್ರನಿಗೆ ಹೊಡೆದು ಮೂಳೆ ಮುರಿದಿದ್ದಾಳೆ.ಘಟನೆಯಲ್ಲಿ ಮೂರು ವರ್ಷದ ಮಗು ಗಂಭೀರ ಗಾಯಗೊಂಡಿದ್ದು, ಇನ್ನೊರ್ವ ಮಗ ಸಾವನ್ನಪ್ಪಿದ್ದಾನೆ.

ಘಟನೆಯ ಬಳಿಕ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಮಹಿಳೆಯ ಕ್ರೂರ ನಡೆಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.